ಸುಳ್ಯ:ಕಾರ್ಕಳದಲ್ಲಿ ನಡೆದ ಎರಡು ದಿನಗಳ ಜೇಸಿಐ ವಲಯ 15ರ ಘಟಕಾಧಿಕಾರಿಗಳ ತರಬೇತಿ ಶಿಬಿರ ಜೇಸಿಐ ಸುಳ್ಯ ಪಯಸ್ವಿನಿಯ ಕೋಶಧಿಕಾರಿ ಜೇಸಿ ಶಶ್ಮಿ ಭಟ್ ಅಜ್ಜಾವರ ಅವರು ಔಟ್ ಸ್ಟ್ಯಾಂಡಿಂಗ್ ಪಾರ್ಟಿಸಿಪೇಟ್ ಅವಾರ್ಡ್ ಲಭಿಸಿದೆ. ಜೇಸಿಐ ವಲಯ 15ರ
ವಲಯಾಧ್ಯಕ್ಷ ಅಭಿಲಾಷ್ ಬಿ ಎ, ತರಬೇತುದಾರರಾದ ಪೂರ್ವ ರಾಷ್ಟೀಯ ಅಧ್ಯಕ್ಷ ಟಿವಿಎನ್ ಮೂರ್ತಿ, ಪೂರ್ವ ರಾಷ್ಟೀಯ ಉಪಾಧ್ಯಕ್ಷ ಸದಾನಂದ ನಾವಡ, ಪೂರ್ವ ವಲಯಾಧ್ಯಕ್ಷ ಕೃಷ್ಣಮೋಹನ್ ಹಾಗೂ ತರಬೇತಿ ಶಿಬಿರದ ಸಭಾಧ್ಯಕ್ಷ ಅಜಿತ್ ಕುಮಾರ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ತರಬೇತಿ ಶಿಬಿರದಲ್ಲಿ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್, ಹಾಗೂ ತಾರಮಾಧವ ಭಾಗವಹಿಸಿದ್ದರು.