ಸುಳ್ಯ:ಎನ್ಸಿಇಆರ್ಟಿ ದೆಹಲಿಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ಡಯಟ್ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಪಾತ್ರಾಭಿನಯ ಹಾಗೂ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.ರಾಷ್ಟ್ರಮಟ್ಟದ ಸ್ಪರ್ಧೆ
ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಜನವರಿ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ. “ಮೊಬೈಲ್ ಹಾಗೂ ಸಮೂಹ ಮಾಧ್ಯಮಗಳ ಸದ್ಬಳಕೆ’ ವಿಷಯದ ಆಧಾರದಲ್ಲಿ ನಡೆದ ಇಂಗ್ಲೀಷ್ ಪ್ರಾತ್ರಾಭಿನಯದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಾದ ಸೃಜನಾದಿತ್ಯಶೀಲ ಕೆ. ಗಹನಾ ಎಸ್. ಅನನ್ಯಾ ಕೆ.ಎನ್. ಸಾಕ್ಷಿ ಪಿ.ಆರ್. ಅಭಿಜ್ಞಾ ಎನ್ ಭಾಗವಹಿಸಿದ್ದರು. ”ಪರಿಸರ ಸ್ನೇಹಿ ಪ್ಲಾಸ್ಟಿಕ್ ನಿರ್ವಹಣೆ” ಬಗೆಗಿನ ಹಾಲಕ್ಕಿ ಜನಪದ ನೃತ್ಯದಲ್ಲಿ ಶ್ರೇಯಾ ಸಿ.ಹೆಚ್, ಜೀವಿಕಾ ಬಿ. ಸಾನ್ವಿ ಬಿ ಎಸ್. ನಿಧಿ ಎ ಜೆ, ನಿಶಾ ಪಿ ಎಸ್. ವೈಷ್ಣವಿ ಪಿ ಇವರು ಭಾಗವಹಿಸಿದ್ದರು.ಶಿಕ್ಷಕರಾದ ಮಮತಾ ಎಂ.ಜಿ. ಲತಾ ವೆಂಕಟೇಶ್ ಪೈ, ನಾಗರಾಜ್ ಪೆರ್ಲಂಪಾಡಿ ಮತ್ತು ಪ್ರಜ್ವಲ್ ಮಾರ್ಗದರ್ಶನ ನೀಡಿದ್ದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಪ್ರಕಾಶ ಮೂಡಿತ್ತಾಯ ಪಿ ಇವರು ಎರಡು ಸ್ಪರ್ಧೆಗಳ ಸಾಹಿತ್ಯ ರಚಿಸಿ ನಿರ್ದೇಶಿಸಿದ್ದರು. ನಾಗರಾಜ್ ಪೆರ್ಲಂಪಾಡಿ ನೃತ್ಯ ತರಬೇತಿ ನೀಡಿದ್ದರು. ವಿಜೇತರನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜೇಶ್ವರಿ ಕಾಡುತೋಟ, ಜನಾರ್ಧನ್ ಮಾಸ್ಟರ್ ಗಣಿತ ಕೇಂದ್ರ ಸುಳ್ಯದ ಅಧ್ಯಕ್ಷರಾದ ಎಂ.ಬಿ.ಸದಾಶಿವ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶೀತಲ್ ಯು, ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ಬಿ ಕೆ, ಶಿಕ್ಷಣ ಸಂಯೋಜಕರಾದ ನಳಿನಿ, ಸಂದ್ಯಾಕುಮಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಕೆ ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಧರ್ ಗೌಡ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾದ ದೇವರಾಜ್, ಹಿರಿಯ ಶಿಕ್ಷಕರಾದ ಡಾ.ಸುಂದರ ಕೇನಾಜೆ, ಪೋಷಕರು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದು ವಿಜೇತರಾದ ವಿದ್ಯಾರ್ಥಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿ ಅಭಿನಂದಿಸಿದರು.