ಸುಳ್ಯ:ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶವಾದ ಬಾಳುಗೋಡು ಗ್ರಾಮಕ್ಕೆ ಯಾವುದೇ ಬಸ್ಸು ವ್ಯವಸ್ಥೆ ಇಲ್ಲದೇ ಇರುವುದರಿಂದ ಮತ್ತು ಹಲವು ದಶಕಗಳಿಂದ ಕೇವಲ ಪುತ್ತೂರಿಗೆ ಮಾತ್ರ ಪಂಜ ಕಾಣಿಯೂರು ರಸ್ತೆಯಾಗಿ ಬಸ್ಸು ಸಂಚರಿಸುತ್ತಿದೆ. ತಾಲೂಕು ಕೇಂದ್ರವಾದ ಸುಳ್ಯವನ್ನೇ ಅವಲಂಭಿಸಿರುವ ಬಾಳುಗೋಡು -ಹರಿಹರ ಪಲ್ಲತ್ತಡ್ಕ ಗ್ರಾಮದ
ನಾಗರಿಕರು, ವಿದ್ಯಾರ್ಥಿಗಳಿಗೆ ಇದರಿಂದ ಸೌಲಭ್ಯ ವಂಚಿತರಾಗಿರುವುದರಿಂದ ಸುಳ್ಯದಿಂದ ಬಾಳಿಗೋಡಿಗೆ ಹೊಸ ಬಸ್ಸು ರೂಟ್ ಆರಂಭಿಸುವಂತೆ ಮತ್ತು ಈಗ ಪುತ್ತೂರಿನಿಂದ ಬಾಳುಗೋಡಿಗೆ ಬರುತ್ತಿರುವ ಬಸ್ಸು ರೂಟ್ ನ್ನು ಬಾಳುಗೋಡಿನ ಪುಣೇರಿವರೆಗೆ ವಿಸ್ತರಿಸುವಂತೆ ಬಾಳುಗೋಡು ಗ್ರಾಮ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್ ಕಿರಿಭಾಗ, ಹಾಗೂ ಕಾಂಗ್ರೆಸ್ ಮುಖಂಡರಾದ ಜಯರಾಮ್ ಭಟ್ ಬೆಟ್ಟ, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್ ಸುಳ್ಯ ಮುಖಂಡರಾದ ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಪುತ್ತೂರಿನ ಕೆ ಎಸ್ ಆರ್ ಟಿ ಸಿ ಪ್ರಾದೇಶಿಕ ವ್ಯವಸ್ಥಾಪಕರಿಗೆ ಮನವಿ ನೀಡಿದರು. ಇದಕ್ಕೆ ಸ್ಪಂದಿಸಿದ ಪ್ರಾದೇಶಿಕ ವ್ಯವಸ್ಥಾಪಕರು ಕೂಡಲೇ ವ್ಯವಸ್ಥೆ ಮಾಡುವುದಾಗಿ ತಿಳಿಸಿರುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.