ಸಂಪಾಜೆ:ಸಂಪಾಜೆ ಗ್ರಾಮದ ಆಲಡ್ಕ ಮಹಮ್ಮಾಯಿ ದೇವಸ್ಥಾನಕ್ಕೆ ಹಾಗೂ ಸಮುದಾಯ ಭವನಕ್ಕೆ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಭೇಟಿ ನೀಡಿದರು.ಆಲಡ್ಕ ಮಹಮ್ಮಾಯಿ ದೈವಸ್ಥಾನ, ದೇವಸ್ಥಾನ ಅಡಳಿತ ಮಂಡಳಿ ಹಾಗೂ ಕಾಲನಿ ನಿವಾಸಿಗಳು ಟಿ.ಎಂ.ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಿದರು. ಸಮುದಾಯದ ಭವನದ
ಮೆಲ್ಚಾವಣಿ ರಚನೆಗೆ ಅನುದಾನ ಹಾಗು ದೈವಸ್ಥಾನ, ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ ನೀಡಿದರು,
ಸಮುದಾಯ ಭವನ ಅಭಿವೃದ್ಧಿ ಹಾಗೂ ದೇವಸ್ಥಾನ ಜೀರ್ಣೋದ್ಧಾರಾ ಕೆಲಸಗಳಿಗೆ ಸರಕಾರದ ಮಟ್ಟದಲ್ಲಿ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಅಡಳಿತ ಮಂಡಳಿಯ ಅಧ್ಯಕ್ಷರಾದ ಬಟ್ಯಪ್ಪ, ಮಲ್ಲ ಆಲಡ್ಕ, ಜಯ ಆಲಡ್ಕ,ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್ ಸಂಪಾಜೆ, ಪಂಚಾಯತ್ ಸದಸ್ಯರಾದ ವಿಜಯ ಅಲಡ್ಕ, ಗಣೇಶ, ವಿನೋದ್ ಸಂಪಾಜೆ, ರಮೇಶ್ ಆಲಡ್ಕ ಮತ್ತು ಮಂಜುಶ್ರೀ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಯ ಅಲಡ್ಕ ಸ್ವಾಗತಿಸಿ ಪಂಚಾಯತ್ ಸದಸ್ಯರಾದ ಜಿ. ಕೆ. ಹಮೀದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.















