ಎಲಿಮಲೆ: ಎಲಿಮಲೆಯ ರಂಜನಿ ಸಂಗೀತ ಸಭಾದ
14ನೇ ವರ್ಷದ ಸಂಗೀತ ಸಂಭ್ರಮ ಡಿಸೆಂಬರ್ 1ರಂದು ಶ್ರೀ ಕ್ಷೇತ್ರ ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ಸಭಾಭವನದಲ್ಲಿ ನಡೆಯಿತು. ದಿನಪೂರ್ತಿ ನಡೆದ ಸಂಗೀತ ಸಂಭ್ರಮ ಪೂರ್ವಾಹ್ನ 8-30ಕ್ಕೆ “ದೀಪೋಜ್ವಲನ ಯೊಂದಿಗೆ ಆರಂಭಗೊಂಡಿತು. ಬಳಿಕ
“ಗುರುವಂದನೆ” “ಗಾನಾಂಜಲಿ” ವಿದ್ಯಾರ್ಥಿಗಳಿಂದ ಸಂಗೀತ ಗಾಯನ ನಡೆಯಿತು.ಪಕ್ಕವಾದ್ಯದಲ್ಲಿ ಧನಶ್ರೀ ಶಬರಾಯ ಮಂಗಳೂರು,
ಪ್ರಣೀತ್ ಬಳ್ಳಕ್ಕುರಾಯ ಉಡುಪಿ, ಹರಿಪ್ರಿಯ ಬಳ್ಳಕ್ಕುರಾಯ ಉಡುಪಿ (ಪಿಟೀಲು), ಶ್ರೀಚರಣ ಅಮೈಕಟ್ಟೆ, ವಿಶ್ವಮಿಹಿರ ಪುತ್ತೂರು,ವತಮನ್ ಎಕ್ಕಡ್ಕ( ಮೃದಂಗದಲ್ಲಿ ಸಹಕರಿಸಿದರು.
ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಿತು.
ಸಂಜೆ ಮುಖ್ಯ ಕಛೇರಿಯಾಗಿ ವಿದ್ವಾನ್ ಅನೀಶ್ ವಿ.ಭಟ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಿತು.
ವಯಲಿನ್ನಲ್ಲಿ ವಿದ್ವಾನ್ ಗಣರಾಜ ಕಾರ್ಲೆ ಕಾಸರಗೋಡು, ಮೃದಂಗದಲ್ಲಿ ವಿದ್ವಾನ್ ಜಿ.ಎಸ್.ನಾಗರಾಜ್ ಬೆಂಗಳೂರು, ಘಟಂನಲ್ಲಿ ವಿದ್ವಾನ್ ಸಚಿನ್ ದೇವಿಪ್ರಸಾದ್ ಬೆಂಗಳೂರು ಸಹಕರಿಸಿದರು. ರಂಜನಿ ಸಂಗೀತ ಸಭಾದ ಸಂಗೀತ ನಿರ್ದೇಶಕಿ ರೇಖಾರೇವತಿ ಹೊನ್ನಡಿ, ಹಾಗು ವ್ಯವಸ್ಥಾಪಕ ನಿರ್ದೇಶಕರಾದ ಸತ್ಯನಾರಾಯಣ ಹೊನ್ನಡಿ ನೇತೃತ್ವದಲ್ಲಿ ಸಂಗೀತ ಸಂಭ್ರಮ ಏರ್ಪಡಿಸಲಾಯಿತು.