ಬೆಳ್ಳಾರೆ: ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅ.30 ರಂದು ಭೇಟಿ ನೀಡಿದರು. ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು.ಆಸ್ಪತ್ರೆಯಲ್ಲಿ
ಖಾಯಂ ವೈದ್ಯರ ಸಮಸ್ಯೆ ಇದ್ದು ಇದನ್ನು ಕೂಡಲೇ ಪರಿಹರಿಸುವುದಾಗಿ ಭರವಸೆ ನೀಡಿದರು. ವೈದ್ಯರ ನೇಮಕದ ಬಗ್ಗೆ ಮಂತ್ರಿಗಳಿಗೆ ತಿಳಿಸುವುದಾಗಿ ಹೇಳಿದರು. ಆಸ್ಪತ್ರೆಯ ಜೀಪು ಸರಿ ಇಲ್ಲದೆ ಇದ್ದು ಬೇರೆ ಜೀಪನ್ನು ಒದಗಿಸಬೇಕೆಂದು ಶಾಸಕರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಾಥ ರೈ ಬಾಳಿಲ, ಗಂಗಾಧರ ರೈ ಪುಡ್ಕಜೆ, ಪಿಡಿಒ ಪ್ರವೀಣ್, ಜಯರಾಮ ಉಮಿಕ್ಕಳ, ಪ್ರೇಮಚಂದ್ರ ಬೆಳ್ಳಾರೆ, ಮುರಳಿ ತಡಗಜೆ, ದಿನೇಶ್ಚಂದ್ರ ಹೆಗ್ಡೆ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.