ಅರಂತೋಡು: ಶತಮಾನೋತ್ಸವ ಆಚರಿಸಿದ
ಅರಂತೋಡು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃಧಿ ಸಮಿತಿಯಿಂದ ಸ್ಪೀಕರ್ ಯು ಟಿ ಖಾದರ್ ಅವರನ್ನು ಮಂಗಳೂರಿನಲ್ಲಿ ಭೇಟಿ ಮಾಡಿ ಆಂಗ್ಲ ಮಾಧ್ಯಮ ತರಗತಿ ಮಂಜೂರಾತಿ ಗೊಳಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.ಮತ್ತು ಶಾಲೆಯನ್ನು ಅಭಿವೃದ್ಧಿ
ಪಡಿಸುವ ಕುರಿತು ಮನವಿ ನೀಡಿದರು. ಅರಂತೋಡು ಶಾಲೆ ಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಸಹಕಾರ ವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಮುಖ್ಯ ಉಪಾಧ್ಯಯ ಗೋಪಾಲಕೃಷ್ಣ ಬನ,ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ ಉಳುವಾರು, ಹಿರಿಯ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಅಮೀರ್ ಕುಕ್ಕುಂಬಳ,ಎಸ್ ಡಿ ಎಮ್ ಸಿ ಸದಸ್ಯ ಸಂಸುದ್ದಿನ್ ಅರಂತೋಡು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರಾಜೀವಿ ಬೆಳ್ಳಾರೆ,ತಾಜುದ್ದೀನ್ ಆರಂತೋಡು ಇದ್ದರು.