ಸುಳ್ಯ:ಕಾರ್ಮಿಕರು ಮುಂದಿರಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸಲು
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಒಪ್ಪಿಗೆ ನೀಡಿದೆ. ಕಾರ್ಮಿಕರ ಹಿತದೃಷ್ಠಿಯಿಂದ ಕಳೆದ ಒಂದೂವರೆ ವರ್ಷಗಳಿಂದ ಪಕ್ಷ ನಡೆಸಿದ ಪ್ರಯತ್ನ ಯಶಸ್ವಿಯಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕೆಎಫ್ಡಿಸಿ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಮುಂದಿರಿಸಿ
ಮುಷ್ಕರ ಘೋಷಿಸಿದ ಸಂದರ್ಭದಲ್ಲಿ ಈ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದೆವು. ಇದೀಗ ಕಾರ್ಮಿಕರು ಮುಂದಿರಿಸಿದ ಬೇಡಿಕೆಗಳಾದ ನಿರಂತರ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಲು, ಖಾಯಂ ಕಾರ್ಮಿಕರಿಗೆ ಇಎಸ್ಐ ಸೌಲಭ್ಯವನ್ನು ನೀಡಲು ನಿಗಮ ಒಪ್ಪಿಗೆ ನೀಡಿದೆ. ಕಾರ್ಮಿಕರ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರಿತ ಕೆಲಸವನ್ನು ನೀಡುವ ಬೇಡಿಕೆಗಳ ಸಂಬಂಧಿಸಿ ಪ್ರಯತ್ನ ನಡೆಸಲಾಗಿದ್ದು ಅದು ಆಗಲಿದೆ ಎಂದು ಬೊಳ್ಳೂರು ತಿಳಿಸಿದರು. ಕಾರ್ಮಿಕರ ಎಲ್ಲಾ ಬೇಡಿಕೆಗಳು ಹಂತ ಹಂತವಾಗಿ ಈಡೇರಿಕೆ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕರ್ನಾಟಕ ಪ್ಲಾಂಟೇಷನ್ & ಇಂಡಸ್ಟ್ರೀಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ನ ಅಧ್ಯಕ್ಷ ಶಿವಕುಮಾರ್ ಕಂದಡ್ಕ, ತೋಟ ತೊಳಿಲಾಲರ್ ಸಂಘದ ಪ್ರಧಾನ ಕಾರ್ಯದರ್ಶಿ ಶರವಣನ್ ಬೇಂಗಮಲೆ, ಕಾರ್ಯದರ್ಶಿ ಚಂದ್ರನ್ ಕೂಟೇಲು, ಸದಸ್ಯ ಗಣೇಶ್ ನಾಗಪಟ್ಟಣ, ಕರ್ನಾಟಕ ಪ್ಲಾಂಟೇಷನ್ & ಇಂಡಸ್ಟ್ರೀಯಲ್ ವರ್ಕರ್ಸ್ ಟ್ರೇಡ್ ಯೂನಿಯನ್ನ ಸದಸ್ಯ ರಕ್ಷಿತ್ ಗೂನಡ್ಕ, ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಮಂಜುನಾಥ್ ಕಂದಡ್ಕ ಉಪಸ್ಥಿತರಿದ್ದರು.















