ಸುಳ್ಯ: ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕಾಡಾನೆ ಉಪಟಳ ಹೆಚ್ಚಿರುವಂತೆಯೇ ಸುಳ್ಯ ನಗರ ವ್ಯಾಪ್ತಿಯಲ್ಲಿಯೂ ಕಾಡಾನೆಗಳ ಉಪಟಳ ಹೆಚ್ಚಿದ. ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೆರೆಮೂಲೆ ಭಾಗದಲ್ಲಿ ಕಾಡಾನೆ ದಾಳಿ ಮಾಡಿ
![](https://thesulliamirror.com/wp-content/uploads/2024/05/IMG_20240511_103928.jpg)
ವ್ಯಾಪಕ ಕೃಷಿ ಹಾನಿ ಮಾಡಿದೆ. ಪಯಸ್ವಿನಿ ನದಿ ದಾಟಿ ನದೀ ತಟದ ತೋಟಗಳಿಗೆ ನುಗ್ಗಿದ ಕಾಡಾನೆಗಳು ಬಾಳೆ, ತೆಂಗು, ಅಡಿಕೆ, ಕೊಕ್ಕೊ ಮತ್ತಿತರ ಕೃಷಿಗಳನ್ನು ನಾಶ ಮಾಡಿದೆ.ಅಬ್ದುಲ್ ಖಾದರ್ ಪಾರೆ, ಲೋಕೇಶ್ ಕೆರಮೂಲೆ ಮತ್ತಿತರ ಕೃಷಿಕರ ತೋಟದಲ್ಲಿ ಕೃಷಿ ಹಾನಿ ಮಾಡಿದೆ. ನಗರ ಪಂಚಾಯತ್ ಸದಸ್ಯರಾದ
![](https://thesulliamirror.com/wp-content/uploads/2024/05/IMG_20240511_103905.jpg)
ಎಂ.ವೆಂಕಪ್ಪ ಗೌಡ, ರಾಜು ಪಂಡಿತ್, ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಮತ್ತಿತರರು ಭೇಟಿ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಸುಳ್ಯ ನಗರದ ಕೇರ್ಪಳ ಭಾಗಕ್ಕೆ ಬಂದಿದ್ದ ಕಾಡಾನೆಗಳ ಹಿಂಡು ಕೃಷಿ ಹಾನಿ ಮಾಡಿದೆ.