ಅರಂತೋಡು:ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ನಡೆಯಿತು. ನೂತನ ಸಮಿತಿ ರಚಿಸಲಾಯಿತು.ಅಧ್ಯಕ್ಷರಾಗಿ ಪ್ರದೀಪ್. ಕೆ, ಕಾರ್ಯದರ್ಶಿಯಾಗಿ ಚೇತನ್ ಅರಂತೋಡು ಉಪಾಧ್ಯಕ್ಷರಾಗಿ ಕುಂಞಿಕಣ್ಣ ಪೆರಾಜೆ ಕೋಶಾಧಿಕಾರಿಯಾಗಿ ಅಭಿಷೇಕ್ ಕುಲ್ಚಾರು ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಕೊಡಂಕೇರಿ ಆಯ್ಕೆಯಾದರು. ಸಮಿತಿಯ ಸದಸ್ಯರಾಗಿ
ಶ್ರೀಜಿತ್ ಅರಂತೋಡು, ಭಾನುಪ್ರಕಾಶ್ ಕೊಡಂಕೇರಿ, ರಕ್ಷಿತ್. ಕೆ. ಪಿ, ಗಣೇಶ್. ಬಿ. ಕೆ, ರಾಜು ಅರ್ಲಡ್ಕ, ಸುಪ್ರೀತ್ ಚಾಂಬಾಡು, ಸುಕುಮಾರ ಚಾಂಬಾಡು, ಬಾಲಕೃಷ್ಣ ಅಂಗಡಿಮಜಲು, ಸತೀಶ್ ತೊಡಿಕಾನ, ಕರುಣಾಕರ ಕಡೆಪಾಲ, ಶಶಿ ಬಿ. ಕೆ,ಅಂಬುಜಾಕ್ಷ ಎಲ್ಪಕಜೆ ಸತೀಶ್ ಕೋಣಗುಂಡಿ, ಅಜಯ್ ಬಂಡೆಡ್ಕ ಆಯ್ಕೆ ಯಾದರು. ಮಹಾಸಭೆಯ

ಪ್ರದೀಪ್, ಚೇತನ್, ಅಭಿಷೇಕ್
ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಶ್ರೀಜಿತ್ ಅರಂತೋಡು ವಹಿಸಿದ್ದರು. ಹಿರಿಯರಾದ ಜನಾರ್ಧನ. ಎ. ಎಂ, ಗೋವಿಂದ ಎ. ಕೆ. ಮತ್ತು ಅಮ್ಮಣಿ ಚಿಟ್ಟನ್ನೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಕಾರ್ಯದರ್ಶಿ ಭಾನುಪ್ರಕಾಶ್ ಕೊಡಂಕೇರಿ ಮಂಡಿಸಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ಕುಂಞಿಕೃಷ್ಣನ್ ಕುತ್ತಿಕೋಲು, ಚಂದ್ರನ್ ಕುತ್ತಿಕೋಲು, ಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ಪವಿತ್ರನ್ ಗುಂಡ್ಯ ಭಾಗವಹಿಸಿ ಮಾತನಾಡಿದರು. ಮಹಿಳಾ ಸಮಿತಿಯ ಪದಾಧಿಕಾರಿಗಳಾದ ಮಾಧವಿ ಕೂರಂಗಾಯ ಮತ್ತು ಕಮಲ ಶುಭ ಹಾರೈಸಿದರು. ಕಳೆದ ಸಾಲಿನ ಎಸ್. ಎಸ್. ಎಲ್ ಸಿ ಮತ್ತು ಪಿ. ಯು. ಸಿ ಉತ್ತೀರ್ಣ ರಾದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಭಾನು ಪ್ರಕಾಶ್ ಕೊಡಂಕೇರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ಸಮಿತಿಯ ಸಭೆ ನಡೆದು ನೂತನ ಸಮಿತಿಯನ್ನು ರಚಿಸಲಾಯಿತು.