ಜಾಲ್ಸೂರು:ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ.22ರಂದು ನಡೆಯುವ ಚುನಾವಣೆಯಲ್ಲಿ
ಕನಕಮಜಲು, ಜಾಲ್ಸೂರು ಸಹಕಾರಿಗಳ ಅಭಿವೃದ್ಧಿ ರಂಗ
12 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.
ಸಾಲಗಾರ ಕ್ಷೇತ್ರ (ಸಾಮಾನ್ಯ)ದಿಂದ
ಚೆನ್ನಕೇಶವ ಎಂ.ಹರಿಪ್ರಕಾಶ್ ಅಡ್ಕಾರು, ವಿಜಯ ಕುಮಾರ ನರಿಯೂರು, ಅಜಿತ್ ಕಾರಿಂಜ, ಅಬ್ದುಲ್ ಖಾದರ್ ಸಿ.ಎಚ್,ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ “ಎ” ಮೀಸಲು ಸ್ಥಾನದಲ್ಲಿ ಮಹಮ್ಮದ್ ಪವಾಝ್ ಕನಕಮಜಲು ಸ್ಪರ್ಧಿಸುತ್ತಿದ್ದಾರೆ.
ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ “ಬಿ” ಮೀಸಲು ಸ್ಥಾನಕ್ಕೆ ಹೇಮಚಂದ್ರ ಗೌಡ ಕುತ್ಯಾಳ ಸ್ಪರ್ಧಿಸುತ್ತಿದ್ದಾರೆ.
ಸಾರಗಾರ ಕ್ಷೇತ್ರ- ಮಹಿಳಾ ಮೀಸಲು ಸ್ಥಾನದಿಂದ ತಿರುಮಲೇಶ್ವರಿ ಎ.ಎಲ್,ಜಯಂತಿ ಕೆ ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ನಾರಾಯಣ ಪಿ, ಸಾಲಗಾರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಭೋಜಪ್ಪ ನಾಯ್ಕ, ಸಾಲಗಾರರಲ್ಲದ ಕ್ಷೇತ್ರದಿಂದ ಸುಬ್ರಹ್ಮಣ್ಯ ಹೊಳ್ಳ ಎಂ. ಸ್ಪರ್ಧಿಸುತ್ತಿದ್ದಾರೆ.