ಸುಳ್ಯ:ಸುಳ್ಯದ ಕೃಷಿ ಇಲಾಖೆ, ಮಂಗಳೂರು ಕೃಷಿ ವಿಜ್ಞಾನ ಕೇಂದ್, ಕೃಷಿ ಸಮಾಜ ಸುಳ್ಯ ಹಾಗೂ ಸುಳ್ಯ ಎನ್ಆರ್ಎಲ್ಎಂ ಸಂಜೀವಿನಿ ಒಕ್ಕೂಟ ಇದರ ವತಿಯಿಂದ ರೈತ ದಿನಾಚರಣೆ ಕಾರ್ಯಕ್ರಮ ಡಿ.23 ರಂದು ಸುಳ್ಯದ
ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಕೆವಿಕೆ ಮಂಗಳೂರು ವತಿಯಿಂದ ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವು ಈ ಸಂದರ್ಭ ನಡೆಯಿತು. ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಕೃಷಿಕ ಸಮಾಜದ ನಿರ್ದೇಶಕರನ್ನು ಗೌರವಿಸಲಾಯಿತು. ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.