ಪಂಜ: ಪಂಜ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಅಮೃತ ಮಹೋತ್ಸವ ಆಚರಣೆಗಾಗಿ ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಗಿದೆ.ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಿರಿಯರಾದ ಜಾಕೆ ಮಾಧವ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.ಸಮಿತಿಯ ಇತರ ಪದಾಧಿಕಾರಿಗಳನ್ನು
ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ ಪ್ರಧಾನ ಕಾರ್ಯದರ್ಶಿಯಾಗಿ ಸವಿತಾರಾ ಮುಡೂರು, ಕಾರ್ಯದರ್ಶಿಗಳಾಗಿ ಗುರುಪ್ರಸಾದ್ ತೋಟ,ಮುಖ್ಯೋಪಾಧ್ಯಾಯರು
ಪ್ರಾಂಶುಪಾಲರು, ಉಪಾಧ್ಯಕ್ಷರಾಗಿ ಬಿ.ಕೆ.ಮಾಧವ ಗೌಡ, ಅಬ್ದುಲ್ ಗಪೂರ್, ಡಾ.ದೇವಿ ಪ್ರಸಾದ್ ಕಾನತ್ತೂರ್, ಕಾರ್ಯಪ್ಪ ಗೌಡ ಚಿದ್ಗಲ್,ದೊಡ್ಡಣ್ಣ ಬರೆಮೇಲು ಖಜಾಂಜಿಯಾಗಿ ಜಯರಾಮ್ ಕಂಬಳ, ಪ್ರಧಾನ ಸಂಚಾಲಕರಾಗಿ ಚಿನ್ನಪ್ಪ ಸಂಕಡ್ಕ ಆಯ್ಕೆಯಾದರು
ಗೌರವ ಸಲಹೆಗಾರರಾಗಿ ಸುಬ್ರಾಯ ಭಟ್ ಅಲಕ,
ಮಹೇಶ್ ಕುಮಾರ್ ಕರಿಕ್ಕಳ,ರವೀಂದ್ರನಾಥ ರೈ ಕೇನ್ಯ,ಆನಂದ ಗೌಡ ಕಂಬಳ, ಶ್ರೇಯಾಂಸ್ ಕುಮಾರ್, ಶೆಟ್ಟಿಮೂಲೆ,ಡಾ. ರಾಮಯ್ಯ ಭಟ್, ಜಯರಾಮ್ ರಾವ್ ಕಾಂತುಕುಮೇರಿ,ಪ್ರಕಾಶ್ ಡಿಸೋಜ,ತುಕಾರಾಂ ಎನೆಕಲ್ಲು,ಸುಬ್ರಹ್ಮಣ್ಯ ಕುಳ,ಸುಬ್ರಮಣ್ಯ ಕಣ್ಕಲ್, ಪ್ರಭಾಕರ್ ಕಿರಿಭಾಗ
ರಾಮಕೃಷ್ಣ ರೈ ಮಾಲೆಂಗ್ರಿ, ಸುಚಿನ್ನ ಕಾಣಿಕೆ, ಸೋಮಶೇಖರ್ ಬಡ್ಡಕೋಟಿ
ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಭಾಗವಹಿಸಿದ ಎಲ್ಲರನ್ನು ಉತ್ಸವ ಸಮಿತಿಯ ಸದಸ್ಯರನ್ನಾಗಿ ಹಾಗೂ ಸಂಚಾಲಕರನ್ನಾಗಿ ಮಾಡುವುದೆಂದು ನಿರ್ಧರಿಸಲಾಯಿತು. ಮುಂದಿನ ಸಮಿತಿಯ ವಿಸ್ತರಣೆಯನ್ನು ಮಾಡಲು ನೂತನ ಅಧ್ಯಕ್ಷರಿಗೆ ಜವಾಬ್ದಾರಿ ನೀಡಲಾಯಿತು. ಡಿಸೆಂಬರ್ ಕೊನೆಯ ವಾರದಲ್ಲಿ ಅದ್ದೂರಿಯಾಗಿ ಅಮೃತೋತ್ಸವ ಆಚರಣೆ ಮಾಡುವುದೆಂದು ನಿರ್ಧರಿಸಲಾಯಿತು. ಶೀಘ್ರವಾಗಿ ಕಾರ್ಯಕ್ರಮದ ರೂಪರೇಷೆಗಳನ್ನು ತಯಾರಿಸಲು ನಿರ್ಧರಿಸಲಾಯಿತು.















