ಪಂಜ: ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ನಾಗರಿಕ ಸಮಿತಿ ಪಂಬೆತ್ತಾಡಿ ತಂಡ ಜ.2ರಂದು ನಾಮಪತ್ರ ಸಲ್ಲಿಸಿತು. ಮಹೇಶ್ ಕುಮಾರ್ ಕರಿಕ್ಕಳ ನೇತೃತ್ವದಲ್ಲಿ12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಕ್ಷೇತ್ರದಿಂದ
ಮಹೇಶ್ ಕುಮಾರ್ ಕರಿಕ್ಕಳ, ಗಣೇಶ್ ಪ್ರಸಾದ್ ಭೀಮಗುಳಿ, ಲಿಂಗಪ್ಪ ಗೌಡ ಮಡಪ್ಪಾಡಿ, ಪುರುಷೋತ್ತಮ ಭಟ್ ನೆಗಳಗುಂಡಿ, ರೋಹಿತ್ ಪಂಬೆತ್ತಾಡಿ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ವೆಂಕಪ್ಪ ಎನ್.ಪಿ. ಬೆಳಗಜೆ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಲವಕುಮಾರ್, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಧರ್ಮಣ್ಣ ನಾಯ್ಕ ಗರಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಗುರುವ ಕಲ್ಚಾರು, ಮಹಿಳಾ ಮೀಸಲು ಸ್ಥಾನದಿಂದ ಶ್ರೀರಂಜಿನಿ ಪಂಜಬೀಡು, ಲೀಲಾವತಿ ಹೆಚ್.ಎಂ.ಮೂಲೆಮನೆ, ಸಾಲಗಾರರಲ್ಲದ ಕ್ಷೇತ್ರದಿಂದ ಧನಂಜಯ ಮಡಪ್ಪಾಡಿ ನಾಮಪತ್ರ ಸಲ್ಲಿಸಿದರು.