ಐವರ್ನಾಡು: ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಡಿ.22 ರಂದು ಚುನಾವಣೆ ನಡೆಯಲಿದೆ. ಐವರ್ನಾಡು ಸಹಕಾರಿ ಸಂಘದ ಹಾಲಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್.ಮನ್ಮಥ ನೇತೃತ್ವದ ತಂಡ 12 ಸ್ಥಾನಗಳಲ್ಲಿ
ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.ಎಸ್.ಎನ್.ಮನ್ಮಥರ ನೇತೃತ್ವದ ತಂಡ ಎಲ್ಲಾ 12 ಸ್ಥಾನಗಳಲ್ಲಿಯೂ ಸ್ಪರ್ಧಿಸುತ್ತಿದ್ದು ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳಾಗಿ ಎಸ್.ಎನ್ .ಮನ್ಮಥ, ಸತೀಶ್ ಎಡಮಲೆ, ಅನಂತಕುಮಾರ ಕೆ.,ಗೋಪಾಲಕೃಷ್ಣ ಸಿ. ಹೆಚ್, ನಟರಾಜ ಎಸ್, ಮಹೇಶ್ ಜಬಳೆ ಸ್ಪರ್ದಿಸುತ್ತಿದ್ದಾರೆ. ಮಹಿಳಾ ಮೀಸಲು ಕ್ಷೇತ್ರದಿಂದ ದಿವ್ಯಾ ರಮೇಶದ ಮಿತ್ತಮೂಲೆ, ಭವಾನಿ ಶೇಖರ ಮಡ್ತಿಲ, ಸ್ಪರ್ಧಿಸುತ್ತಿದ್ದಾರೆ.
ಹಿಂದುಳಿದ ವರ್ಗ ಎ ಮೀಸಲು ಸ್ಥಾನಕ್ಕೆ ಮಧುಕರ ನಿಡುಬೆ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ರವಿನಾಥ ಎಂ.ಎಸ್.ಸ್ಪರ್ಧಿಸುತ್ತಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಚಂದ್ರಶೇಖರ ಎಸ್. ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಪುರಂದರ ಶಾಂತಿಮೂಲೆ
ಸ್ಪರ್ಧಿಸುತ್ತಿದ್ದಾರೆ..
