ಸುಳ್ಯ:ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜ. 17ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆದಿದ್ದರೆ. ಒಂದು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ
ಶ್ರೀಪತಿ ಭಟ್ ಮಜಿಗುಂಡಿ,ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಸುಧಾಕರ ಆಲೆಟ್ಟಿ, ಹರಿಪ್ರಸಾದ್ ಕಾಪುಮಲೆ, ಚಿದಾನಂದ ಕೋಲ್ಚಾರು ಜಯ ಗಳಿಸಿದರು.
ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿದ್ಯಾ ಕುಡೆಕಲ್ಲು,ಉಷಾ ಪಾಲಡ್ಕ ಗೆಲುವು ಸಾಧಿಸಿದ್ದಾರೆ.
ಪ.ಪಂಗಡ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ನಾಯ್ಕ್ ಮಜಿಗುಂಡಿ, ಪ.ಜಾತಿ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮದಾಸ ಮೊರಂಗಲ್ಲು. ಹಿಂದುಳಿದ ವರ್ಗ ಪ್ರವರ್ಗ ಎ’ ಮೀಸಲು ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾಧರ ಬಿ.ಕೆ ಬಡ್ಡಡ್ಕ ಗೆಲುವು ಸಾಧಿಸಿದರೆ, ಹಿಂದುಳಿದ ವರ್ಗ ಪ್ರವರ್ಗ ಬಿ’ ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೊಯಿಂಗಾಜೆ ಜಯ ಗಳಿಸಿದರು.