ಸುಳ್ಯ:ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.ಅನ್ಸಾರುಲ್ ಮುಸ್ಲಿಮೀನ್ ನಿರ್ದೇಶಕರಾದ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್ ಧ್ವಜಾರೋಹಣ ನೆರವೇರಿಸಿದರು.ಸುಳ್ಯ ತಾಲೂಕು ಎಸ್.ಎಂ.ಎಫ್ ಅಧ್ಯಕ್ಷ ಹಾಜಿ ಎಸ್.ಎ ಹಮೀದ್ ದುವಾ ನೆರವೇರಿಸಿದರು. ನಿವೃತ್ತ ಪ್ರಾಧ್ಯಾಪಕ ಶಶಿಧರ್ ಎಂ.ಜೆ ಸ್ವಾತಂತ್ರ್ಯ
ಸಂದೇಶ ಭಾಷಣ ಮಾಡಿದರು.ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಪ್ರ.ಕಾರ್ಯದರ್ಶಿ ಆಶಿಕ್ ಸುಳ್ಯ ಪ್ರತಿಜ್ಞಾ ಬೋಧನೆ ನಡೆಸಿದರು.ಸುಳ್ಯ ಟೌನ್ ಅಧ್ಯಕ್ಷ ಶಹೀದ್ ಪಾರೆ, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ, ಅಬ್ದುಲ್ ರಜಾಕ್ ಕರಾವಳಿ, ಇಕ್ಬಾಲ್ ಸುಳ್ಯ, ಇಕ್ಬಾಲ್ ಸುಣ್ಣಮೂಲೆ, ಹಾಜಿ ಅಹ್ಮದ್ ಸುಪ್ರೀಂ,ಅಹ್ಮದ್ ಪಾರೆ, ಗಾಂಧಿನಗರ ಜುಮಾ ಮಸೀದಿ ನಿರ್ದೇಶಕರಾದ ಇಬ್ರಾಹಿಂ ಶಿಲ್ಪ , ರಫೀಕ್ ಫ್ಯಾನ್ಸಿ, ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ಸಾಧಿಕ್ ಸುಳ್ಯ, ನಾಸಿರ್ ಮಾಂಬ್ಳಿ, ಮಶೂದ್ ಮಚ್ಚು, ನಿಸಾರ್ ಒರ್ಕುಟ್
ಅಬ್ದುಲ್ ಕಯ್ಯುಂ, ಮುಹಮ್ಮದ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು. ಟೌನ್ ಶಾಖೆ ವರ್ಕಿಂಗ್ ಕಾರ್ಯದರ್ಶಿ ನಿಸಾರ್ ಕಾರ್ಯಕ್ರಮ ನಿರೂಪಿಸಿದರು.