ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ
ಅಧ್ಯಕ್ಷೆ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಪದ್ಮಾವತಿ ವರದಿ ಲೆಕ್ಕ ಪತ್ರ ಮಂಡಿಸಿದರು ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಅಬೂಸಾಲಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. 9-11 ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.ನಗರ ಯೋಜನಾ ಪ್ರಾಧಿಕಾರಕ್ಕೆ 9-11 ಪ್ರತಿ ಕಳುಹಿಸಿ ನಂತರ
9-11 ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು. ಅದಕ್ಕೆ ಜಿ. ಕೆ. ಹಮೀದ್ ಆಕ್ಷೇಪ ಮಾಡಿ. ಪಂಚಾಯತ್ ರಾಜ್ ಇಲಾಖೆಯ ಆದೇಶ ತೋರಿಸಿ ಇಲ್ಲೇ ಮೊದಲಿನಂತೆ 9-11 ಮಾಡಬೇಕು ಎಂದು ಪಟ್ಟು ಇಡಿದರು. ಜಗದೀಶ್ ರೈ, ಅಬೂಸಾಲಿ, ರಜನಿ ಮಾತನಾಡಿ ಜನರಿಗೆ ತೊಂದರೆ ಆಗುತ್ತಿದೆ ಈ ಬಗ್ಗೆ ನಿರ್ಣಯ ಮಾಡಿ ಎಂದರು. ಸುಂದರಿ ಮುಂಡಡ್ಕ, ಶೌವಾದ್. ಮೊದಲದವರು ಧ್ವನಿಗೂಡಿಸಿದರು. ಬೆಳಿಗ್ಗೆ 10.30 ಗಂಟೆಗೆ ಆರಂಭಗೊಂಡ ಸಭೆ ಸಂಜೆ 5 ಗಂಟೆಗೆ ಮುಕ್ತಾಯಕಂಡಿತು. ಚಟ್ಟೆಕಲ್ಲು ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಿ ಇಲ್ಲದಿದ್ದರೆ ಧರಣಿ ನಡೆಸುವುದಾಗಿ ಜಿ. ಕೆ. ಹಮೀದ್ ಗೂನಡ್ಕ ಹೇಳಿದರು. ಕಲ್ಲುಗುಂಡಿ ಶಾಲೆಯ ಬಿಸಿಯೂಟ ಕೊಠಡಿ ಟೆಂಡರ್ ವಿಳಂಬದ ಬಗ್ಗೆ ಚರ್ಚೆ ನಡೆಯಿತು.15 ನೇ ಹಣಕಾಸು ಯೋಜನೆಯಡಿಯಲ್ಲಿ 23-24 ನೇ ಸಾಲಿನಲ್ಲಿ 30 ಲಕ್ಷ ಅನುದಾನ ಬರಬೇಕಿತ್ತು ಆದರೇ 5 ಲಕ್ಷ ಮಾತ್ರ ಬಂದಿದೆ
ಯಾಕಾಗಿ ಬಂದಿಲ್ಲ ಎಂದು ಅಬೂಸಾಲಿ. ಜಿ. ಕೆ. ಹಮೀದ್, ಜಗದೀಶ್ ರೈ, ಸುಂದರಿ ಪ್ರಶ್ನಿಸಿ ಈ ಕುರಿತು ನಿರ್ಣಯ ಮಾಡಿ ಕಳುಹಿಸಲು ತೀರ್ಮಾನಿಸಲಾಯಿತು. ಉದ್ಯೋಗ ಖಾತ್ರಿ ಕೆಲಸ ವಿಳಂಬ,ಕುಡಿಯುವ ನೀರಿನ ಬಿಲ್ ಪಾವತಿಗೆ ಬಾಕಿ ಇರುವವರ ಸಂಪರ್ಕ ಕಡಿತ ಸೇರಿ ಹಲವು ವಿಚಾರಗಳಲ್ಲಿ ಚರ್ಚೆ ನಡೆಯಿತು. ಪಂಚಾಯತ್ ನೇತೃತ್ವದಲ್ಲಿ ಮಾರ್ಚ್ 6 ರಂದು ರಸ್ತೆ ಕಾಂಕ್ರಿಟ್, ಕಟ್ಟಡ ಇತರ ಅಭಿವೃದ್ಧಿ ಯೋಜನೆ ಉದ್ಘಾಟನೆ ಹಾಗೂ ಅದೇ ದಿನ ಮಹಿಳಾ ಗ್ರಾಮ ಸಭೆ ನಡೆಸಲು ತೀರ್ಮಾನಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ 9-11 ಸಮಸ್ಯೆ. ಉದ್ಯೋಗ ಖಾತ್ರಿ ಯೋಜನೆ. ಬಗ್ಗೆ ಸಭೆಗೆ ಆಗಮಿಸಿದ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತರಲಾಯಿತು ಸಭೆಯಲ್ಲಿ ವಿಮಲಾ ಪ್ರಸಾದ್ ಲಿಸ್ಸಿ ಮೊನಾಲಿಸಾ ಸುಶೀಲಾ, ವಿಜಯಕುಮಾರ್. ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಉಪಸ್ಥಿತರಿದ್ದರು.