ಮಂಗಳೂರು:ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ನೇತೃತ್ವದ ನಿಯೋಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಡಾ.ಆನಂದ್ ಅವರನ್ನು ಭೇಟಿ ಮಾಡಿ ಗ್ರಾಮದ ಸಮಸ್ಯೆ ಬಗ್ಗೆ ವಿವರಿಸಿದರು. ಗ್ರಾಮದ ಮೂಲಭೂತ ಸಮಸ್ಯೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಪಂಚಾಯತ್
ಅಭಿವೃದ್ಧಿ ಅಧಿಕಾರಿ ರಜೆಯ ಕಾರಣ ಪಂಚಾಯತ್ನ ಆಡಳಿತ ವ್ಯವಸ್ಥೆಗೆ ತೊಂದರೆಯಾಗಿದ್ದು ಕೂಡಲೇ ಬದಲಿ ವೆವಸ್ಥೆ ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡರು. ಗ್ರಾಮ ಪಂಚಾಯತ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುತ್ತಿದ್ದು ಪಾರ್ಕಿಂಗ್, ಮಾರುಕಟ್ಟೆ, ಒಳಚರಂಡಿ ವೆವಸ್ಥೆಗೆ. ಘನ ತ್ಯಾಜ್ಯ ವ್ಯವಸ್ಥೆಗೆ ಸ್ಥಳದ ಅಭಾವ. ಸರಕಾರಿ ಜಾಗದ ಅಲಭ್ಯತೆ ಬಗ್ಗೆ ಸಿ.ಇ ಓ. ಆನಂದ್ ರವರ ಗಮನಕ್ಕೆ ತರಲಾಯಿತು. ನಿಯೋಗದಲ್ಲಿ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸದಸ್ಯರಾದ ವಿಮಲಾಪ್ರಸಾದ್, ಅನುಪಮಾ ಉಪಸ್ಥಿತರಿದ್ದರು. ಸಿಇಒ ತಕ್ಷಣ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.