ಸುಳ್ಯ: ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ ಅವರ ಸುಳ್ಯ ರೋಟರಿ ಕ್ಲಬ್ಗೆ ಅಧಿಕೃತ ಭೇಟಿ ಕಾರ್ಯಕ್ರಮ ಏ.19ರಂದು ನಡೆಯಿತು. ಈ ಸಂದರ್ಭದಲ್ಲಿ ಮಧುಸೂದನ್ ಕುಂಭಕ್ಕೋಡು, ಲತಾ ಮಧುಸೂದನ್ ಅವರ ಕಸ್ತೂರಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅವರು ರೋಟರಿ ವತಿಯಿಂದ ಹಲವು ಜನೋಪಯೋಗಿ ಯೋಜನೆಗಳನ್ನು
ಹಮ್ಮಿಕೊಳ್ಳಲಾಗುತಿದೆ ಎಂದು ಹೇಳಿದರು.ರೋಟರಿ ಜಿಲ್ಲೆಯ ವತಿಯಿಂದ ಅಂಗನವಾಡಿಗಳ ಪುನರುಜ್ಜೀವನಕ್ಕಾಗಿ ಯೋಜನೆ ರೂಪಿಸಿದ್ದು, 150 ಅಂಗನವಾಡಿಗಳಿಗೆ ಈಗಾಗಲೇ ಸೌಲಭ್ಯಗಳನ್ನು ಮುಟ್ಟಿಸಲಾಗಿದೆ. ಇನ್ನು 600 ಅಂಗನವಾಡಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ಎಲ್ಲರನ್ನು ಅಕ್ಷರಸ್ಥರನ್ನಾಗಿಸುವ ಯೋಜನೆ ಹಾಗೂ ಮಳೆನೀರ ಕೊಯ್ಲು ಕಾರ್ಯಕ್ರಮಗಳನ್ನು ನಡೆಸಲಾಗುತಿದೆ. ಅಗತ್ಯವಿರುವ ಜಿಲ್ಲೆಗಳಲ್ಲಿ ಅದನ್ನು ಅನುಷ್ಠಾನಿಸುತ್ತಿದ್ದೇವೆ. ದೇಶದಲ್ಲಿ ಪೋಲಿಯೋ ನಿರ್ಮೂಲನೆಗೊಂಡಿದ್ದರೂ ಪಕ್ಕದ ರಾಷ್ಟ್ರಗಳಲ್ಲಿ ಅದು ಇದ್ದರೆ ಮತ್ತೆ ನಮ್ಮಲ್ಲಿಗೆ ಹರಡಬಹುದು ಎಂಬ ಕಾರಣಕ್ಕಾಗಿ ಇಡೀ ಜಗತ್ತನ್ನೇ ಪೊಲೀಯೋ ಮುಕ್ತಗೊಳಿಸಲು ರೋಟರಿ ಇಂಟರ್ನ್ಯಾಷನಲ್ ಕಾರ್ಯಕ್ರಮ ಯೋಜಿಸಿದೆ ಎಂದು ಅವರು ಹೇಳಿದರು.
ಸುಳ್ಯ ರೋಟರಿ ಅಧ್ಯಕ್ಷ ಆನಂದ ಖಂಡಿಗ ಸ್ವಾಗತಿಸಿ, ರೋಟರಿ ವತಿಯಿಂದ ಮಾಡಿರುವ ಕಾರ್ಯಕ್ರಮಗಳ ವಿವರ ನೀಡಿದರು. ಕಾರ್ಯದರ್ಶಿ ಕಸ್ತೂರಿಶಂಕರ್ ವಂದಿಸಿದರು.
ಎಂ.ಮೀನಾಕ್ಷಿ ಗೌಡ, ಪಿ.ಗಣೇಶ್ ಭಟ್, ಯೋಗಿತಾ ಗೋಪಿನಾಥ್, ಪ್ರಭಾಕರನ್ ನಾಯರ್, ರಮಾ, ಮಧುಸೂದನ್ ಕುಂಭಕ್ಕೋಡು, ಲತಾ ಮಧುಸೂದನ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.