ಕುಕ್ಕುಜಡ್ಕ:ಅಮರ ಸಂಘಟನಾ ಸಮಿತಿ ಸುಳ್ಯ ಇದರ ವತಿಯಿಂದ ದಿ. ಮುರಾರಿ ಕಡಪಳ ಮತ್ತು ದಿ. ನವೀನ್ ಸಂಕೇಶ ಸ್ಮರಣಾರ್ಥ 2ನೇ ವರುಷದ ಬೃಹತ್ ರಕ್ತದಾನ ಶಿಬಿರ ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಕುಸುಮಾಧರ ಮುಕ್ಕೂರು ಅಧ್ಯಕ್ಷತೆ ವಹಿಸಿದ್ದರು. ಮಿತ್ರವೃಂದ ಪೈಲಾರು ಇದರ ನಿರ್ದೇಶಕರಾದ
ಜಯಂತ್ ನಾಯರ್ಕಲ್ಲು ಉದ್ಘಾಟಿಸಿದರು. ಅಮರಮುಡ್ನೂರು ಗ್ರಾ.ಪಂ.ಅಧಯಕ್ಷೆ ಜಾನಕಿ ಕಂದಡ್ಕ , ಶಾಲಾ ಎಸ್ಡಿಎಂಸಿ ಅಧ್ಯಕ್ಷ ವಿನಯ ಸಂಕೇಶ, ಗ್ರಾ.ಪಂ.ಸದಸ್ಯ ಜಯಪ್ರಕಾಶ್ ದೊಡ್ಡಿಹಿತ್ಲು, ಕುಲದೀಪ್ ಬಿ ಜೆ ಸಾರ್ವಜನಿಕ ಸಂಪರ್ಕ ಅಧಿಕಾರಿ,ರೊಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು,ಸಜನಿ ಮಾರ್ಟಿಸ್ ತಾಂತ್ರಿಕ ಮೇಲ್ವಿಚಾರಕರು ರೊಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಉಪಸ್ಥಿತರಿದ್ದರು.ಹರ್ಷಿತ್ ದಾತಡ್ಕ ಸ್ವಾಗತಿಸಿ, ಪ್ರವೀಣ್ ಕುಲಾಲ್ ವಂದಿಸಿದರು. ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.
ಅಮರ ಸಂಘಟನಾ ಸಮಿತಿಯ ಸದಸ್ಯರಾದ ಸಾತ್ವಿಕ್ ಮಡಪ್ಪಾಡಿ, ರಜನಿಕಾಂತ್ ಉಮ್ಮಡ್ಕ, ಜಯಪ್ರಸಾದ್ ಸಂಕೇಶ, ಹಿತೇಶ್ ನಾರ್ಕೊಡು, ಮಿಥುನ್ ಪೈಲಾರು, ಮನೀಶ್ ಕಡಪಳ,ಅನೀತಾ ಮಂಜುನಾಥ ಕುಕ್ಕುಜಡ್ಕ, ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.