ಜಾಲ್ಸೂರು:ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ಡಿ.22ರಂದು ನಡೆಯುವ ಚುನಾವಣೆಗೆ ಒಟ್ಟು 29 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ. ಎಲ್ಲಾ 12 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಸುಧಾಕರ ಕಾಮತ್ ಸ್ಪರ್ಧಿಸುತ್ತಿದ್ದಾರೆ.
ಸಾಲಗಾರ ಕ್ಷೇತ್ರ (ಸಾಮಾನ್ಯ)ದಲ್ಲಿ
ಡಾ.ಗೋಪಾಲಕೃಷ್ಣ ಭಟ್ ಕಾಟೂರು, ರಘುರಾಮ ಗೌಡ ಕೆ.ಬಿ, ತಿಲೋತ್ತಮ ಕೊಲ್ಲಂತಡ್ಕ, ಕುಸುಮಾಧರ ಅರ್ಭಡ್ಕ, ಸುನಿಲ್ ಅಕ್ಕಿಮಲೆ, ಕಣದಲ್ಲಿದ್ದಾರೆ.ಹಿಂದುಳಿದ ವರ್ಗ ಪ್ರವರ್ಗ “ಎ” ಸಾಲಗಾರ ಕ್ಷೇತ್ರದಲ್ಲಿ ಗಂಗಾಧರ ರೈ ಸೋಣಂಗೇರಿ,ಸಾಲಗಾರ ಕ್ಷೇತ್ರ ಹಿಂದುಳಿದ ವರ್ಗ ಪ್ರವರ್ಗ “ಬಿ” ಮೀಸಲು ಸ್ಥಾನದಲ್ಲಿ ಸಂದೀಪ್ ಕದಿಕಡ್ಕ,
ಸಾಲಗಾರ ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ವೆಂಕಪ್ಪ ನಾಯ್ಕ ದೇರ್ಕಜೆ,ಸಾಲಗಾರ ಕ್ಷೇತ್ರ- ಮಹಿಳಾ ಮೀಸಲು ಸ್ಥಾನದಿಂದ
ವಿನುತಾ ಸಾರಕೂಟೇಲು,ದಮಯಂತಿ ಕಣದಲ್ಲಿದ್ದಾರೆ.
ಸಾಲಗಾರ ಕ್ಷೇತ್ರ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ನಿರಂಜನ ಬೊಳುಬೈಲು ಸ್ಪರ್ಧಿಸುತ್ತಿದ್ದಾರೆ.
![](https://thesulliamirror.com/wp-content/uploads/2024/12/IMG-20241218-WA0022-650x1024.jpg)
.