ಸುಳ್ಯ: ಕಾಸರಗೋಡಿನಲ್ಲಿ ಕಳೆದ ೪೨ ವರ್ಷಗಳಿಂದ ಮನೆ ಮಾತಾಗಿರುವ ಬಿಂದು ಜ್ಯುವೆಲ್ಲರಿಯ ಮೂರನೇ ಶಾಖೆ ಸುಳ್ಯದ ಪೊಲೀಸ್ ಠಾಣೆಯ ಮುಂಭಾಗದ ನೂತನ ಕಟ್ಟಡದಲ್ಲಿ ಶನಿವಾರ ಶುಭಾರಂಭಗೊಂಡಿದೆ.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಬಿಂದು ಜ್ಯುವೆಲ್ಲರಿಯ ಸುಳ್ಯ ಶಾಖಾ ಮಳಿಗೆಯನ್ನು ಉದ್ಘಾಟಿಸಿದರು. ಚಲನಚಿತ್ರ ನಟ ಮತ್ತು
ನಿರ್ದೇಶಕ ಅರ್ಜುನ್ ಕಾಪಿಕಾಡ್ ಹಾಗೂ ಚಲನಚಿತ್ರ ನಟಿ ವಿಕೀಷಾ ರಾವ್ ಸಂಸ್ಥೆಗೆ ಶುಭಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಅಭಿಲಾಷ್ ಮಾತನಾಡಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಅಜಿತೇಶ್, ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ಮದರ್ ಥೆರೆಸಾ ಚರ್ಚ್ನ ಫಾ.ಕ್ರಿಸ್ಟಿನ್, ಉದ್ಯಮಿ ಕೃಷ್ಣ ಕಾಮತ್, ಸುಳ್ಯ ಮುಹಿಯಾದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ.ಮುಸ್ತಫಾ, ಸುಳ್ಯ ನ.ಪಂ. ಮಾಜಿ ಅಧ್ಯಕ್ಷರಾದ ಎಂ.ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ, ಎನ್.ಎ.ರಾಮಚಂದ್ರ, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ಸುಳ್ಯ ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಉದ್ಯಮಿ ಆದಂ ಹಾಜಿ ಕಮ್ಮಾಡಿ, ನ.ಪಂ.ಸದಸ್ಯರಾದ ಕಿಶೋರಿ ಶೇಟ್, ರಾಜು ಪಂಡಿತ್, ನ.ಪಂ. ಮಾಜಿ ಸದಸ್ಯ ಗೋಕುಲ್ ದಾಸ್, ಸಂಕೀರ್ಣ ಮಾಲಕ ರಮೇಶ್ ಸೋಮಯಾಗಿ ಮತ್ತಿತರರು ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.