The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಭಾರೀ ಮಳೆ-ಅಡಿಕೆ ತೋಟಗಳು ವಾರಗಟ್ಟಲೆ ಜಲಾವೃತ: ಅಡಿಕೆಗೆ ಕೊಳೆ ರೋಗ ಬಾದಿಸುವ ಆತಂಕದಲ್ಲಿ ಕೃಷಿಕರು

by ದಿ ಸುಳ್ಯ ಮಿರರ್ ಸುದ್ದಿಜಾಲ July 16, 2022
by ದಿ ಸುಳ್ಯ ಮಿರರ್ ಸುದ್ದಿಜಾಲ July 16, 2022
Share this article

*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಳೆದ 15 ದಿನಗಳಿಂದಲೂ ಹೆಚ್ಚು ಸಮಯದಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಎಡೆ ಬಿಡದೆ ಸುರಿಯುವ ಭಾರೀ ಮಳೆಯಿಂದ ಅಡಿಕೆ ಕೃಷಿಗೆ ಕೊಳೆ ರೋಗ ಹರಡುವ ಅತಂಕ ಎದುರಾಗಿದ್ದು ಅಡಿಕೆ ಕೃಷಿಕರಿಗೆ ಕೈಗೆ ಬಂದ‌ ತುತ್ತು ಬಾಯಿಗೆ ಬಾರದಿರುವ ಸಾಧ್ಯತೆ ಇದೆ ಎಂದು ಸುಳ್ಯ ತಾಲೂಕಿನ ಹಲವು ಮಂದಿ ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಎಡೆ ಬಿಡದೆ ಮಳೆ‌ ಸುರಿಯುತ್ತಿದ್ದು ಅಡಿಕೆ ಕೃಷಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂಬುದು ಅಡಿಕೆ ಬೆಳೆಗಾರರ ಆತಂಕ. ಹಳ್ಳ ಕೊಳ್ಳ, ಹೊಳೆ, ನದಿಗಳು ತುಂಬಿ ಹರಿದ ಕಾರಣ ಹಲವು ಅಡಿಕೆ ತೋಟಗಳಿಗೆ ನೀರು ನುಗ್ಗಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ವಾರಗಟ್ಟಲೆ ತೋಟಗಳು ಜಲಾವೃತವಾಗಿತ್ತು. ಹೊಳೆ, ನದಿಗಳ ನೀರು ಇಳಿದರೂ ತೋಟಗಳಲ್ಲಿ ಒರತೆ, ನೀರು, ಕಣಿ ಪೂರ್ತಿ ನೀರು ತುಂಬಿ ತುಳುಕಿದೆ.ಮೇಲಿನಿಂದ ಎಡೆ ಬಿಡದೆ ಸುರಿಯುವ ಮಳೆ, ತೋಟದಲ್ಲಿ ತುಂಬಿರುವ ನೀರು ಅಡಿಕೆ‌ ಕೃಷಿಗೆ ದೊಡ್ಡ ಹೊಡೆತ ನೀಡಬಹುದು ಎಂಬುದು ಕೃಷಿಕರ ಅಭಿಪ್ರಾಯ. ಸುಳ್ಯ ತಾಲೂಕಿನಲ್ಲಿ ಪ್ರತಿ ದಿನ ಸರಾಸರಿ 100-150 ಮಿ.ಮಿ. ಮಳೆ ಸುರಿಯುತ್ತಿದ್ದು
ಕಳೆದ 15 ದಿನಗಳಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 1300 ರಿಂದ 1400 ಮಿ.ಮಿ.ಗಿಂತ ಅಧಿಕ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಪೂರ್ತಿ ಬರುವ ಮಳೆಯ ಸರಾಸರಿಗಿಂತಲೂ ಇದು ಅಧಿಕ. ಇದರಿಂದ ಕೊಳೆ ರೋಗ ಅಪ್ಪಳಿಸಲು ರಹದಾರಿಯಾಗಬಹುದು. ಈಗ ರೋಗ ಬಾದಿಸಿದೆಯಾ ಎಂಬುದು ಗೊತ್ತಾಗುವುದಿಲ್ಲ. ಮಳೆ ಬಿಟ್ಟು ಒಂದೆರಡು ದಿನ ಬಿಸಿಲು ಬಂದಾಗ ಕೊಳೆ ರೋಗ ಅಪ್ಪಳಿಸಿದೆಯಾ ಅಥವಾ ಬಂದರೂ ಯಾವ ಪ್ರಮಾಣದಲ್ಲಿ ಬಂದಿದೆ ಎಂಬ ತೀವ್ರತೆ ತಿಳಿಯುತ್ತದೆ ಎಂದು ಕೃಷಿಕರು ಹೇಳುತ್ತಾರೆ. 2018ರಲ್ಲಿ ಈ ರೀತಿಯ ರಣ ಭೀಕರ‌ ಮಳೆ ನಿರಂತರ ಬಂದಿತ್ತು. ಆ ವರ್ಷ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಾದಿಸಿ ಕೃಷಿ ನಾಶ ಆಗಿತ್ತು ಎಂದು ಅಡಿಕೆ ಬೆಳೆಗಾರರು ನೆನಪಿಸುತ್ತಾರೆ. ಅದೇ ರೀತಿಯ ಮಳೆಗಾಲ ಈ ಬಾರಿ ಪುನರಾವರ್ತನೆ ಆಗಿದೆ ಎಂಬುದು ಕೃಷಿಕರ‌ ಟೆನ್ಷನ್ ಹೆಚ್ಚಲು ಕಾರಣವಾಗಿದೆ.

ಔಷಧಿ ಸಿಂಪಡಣೆ ಅಸಾಧ್ಯ:
ಮಳೆಗಾಲ ಆರಂಭಕ್ಕೆ ಮುನ್ನ ಅಡಿಕೆ ಬೆಳೆಗಾರರು ಒಂದು ಬಾರಿ ಔಷಧಿ ಸಿಂಪಡಣೆ ಮಾಡಿದ್ದರು. ಒಮ್ಮೆ ಔಷಧಿ ಸಿಂಪಡಣೆ ಮಾಡಿದರೆ ಒಂದು ಸಾವಿರ ಮಿಲಿ ಮೀಟರ್ ಮಳೆಯನ್ನು ರೋಗದಿಂದ ತಡೆಯುವ ಶಕ್ತಿ ಇರುತ್ತದೆ ಎಂಬುದು ಕೃಷಿಕರ ಲೆಕ್ಕಾಚಾರ. ಆದರೆ ಈಗ ಅದಕ್ಕಿಂತ ಹೆಚ್ಚು ಮಳೆ‌ ಸುರಿದಿರುವ ಕಾರಣ ಮತ್ತು ಅವಧಿ ಮುಗಿದಿದೆ. ಆದರೆ ಅವಧಿ ಮುಗಿದರೂ ಈಗ ಔಷಧಿ ಸಿಂಪಡಿಸುವ ಸ್ಥಿತಿ ಇಲ್ಲ. ಹಲವು ಕಡೆಗಳಲ್ಲಿ ಒಂದು ಬಾರಿಯೂ ಸಿಂಪಡಣೆ‌ ಮಾಡದ ತೋಟಗಳೂ ಇದೆ.

ಅಡಿಕೆ ಈಗಲೂ ಉದುರುತಿದೆ:
ಮಳೆಗಾಲ ಆರಂಭಕ್ಕೆ ಮುನ್ನ ಹಲವು ಅಡಿಕೆ ತೋಟಗಳಲ್ಲಿ ನಳ್ಳಿ ಉದುರುವುದು ವ್ಯಾಪಕವಾಗಿ ಕಂಡು ಬಂದಿತ್ತು. ಇದರಿಂದ ಹಲವು ತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ಅಡಿಕೆ ನಷ್ಟ ಆಗಿತ್ತು. ಹವಾಮಾನ ವೈಪರೀತ್ಯ, ಉಷ್ಣಾಂಶದ ಏರುಪೇರು, ಫಂಗಸ್ ಬಾದೆ, ಕೀಟ ಬಾದೆಯಿಂದ‌ ಈ ರೀತಿ ನಳ್ಳಿ ಉದುರುತ್ತಿತ್ತು. ಕೆಲವೆಡೆ ಅದು ಮುಂದುವರಿದಿದ್ದು ಬೆಳೆದು ದೊಡ್ಡದಾದ ಅಡಿಕೆ ಕೂಡ ಈಗಲೂ ಬಿದ್ದು ಹೋಗುತ್ತದೆ ಎಂದು ಕೃಷಿಕರು ಹೇಳುತ್ತಾರೆ.

ಈ ರೀತಿ ನಿರಂತರ ಮಳೆ‌ ಸುರಿದಿರುವುದು ಅಡಿಕೆ ಕೃಷಿಗೆ ಮಾರಕವಾಗಿ ಪರಿಣಮಿಸುವ ಆತಂಕ ಇದೆ.2018ರಲ್ಲಿ ಸಮಾನ ರೀತಿಯಲ್ಲಿ ಮಳೆ ಸುರಿದಿತ್ತು.ಆ ವರ್ಷ ಕೊಳೆ ರೋಗ ಬಾದೆಯಿಂದ ಭಾರೀ ಪ್ರಮಾಣದಲ್ಲಿ ಅಡಿಕೆ ಕೃಷಿ ನಶಿಸಿ ಹೋಗಿತ್ತು.
-ಎಂ.ಡಿ.ವಿಜಯಕುಮಾರ್
ಕೃಷಿಕರು.ಮಡಪ್ಪಾಡಿ.

ಮಳೆಗಾಲಕ್ಕೆ ಮುನ್ನ ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆ ಮಾಡಿದ್ದರೂ ಈಗ ಅವಧಿ ಮುಗಿದಿದೆ. ಹಲವು ಕೃಷಿಕರಿಗೆ ಒಮ್ಮೆಯೂ ಸಮರ್ಪಕವಾಗಿ ಔಷಧಿ ಸಿಂಪಡಣೆ ಮಾಡಲೂ ಸಾಧ್ಯವಾಗಲಿಲ್ಲ. ಇದರಿಂದ ಕೊಳೆ ರೋಗ ಬರುವ ಸಾಧ್ಯತೆ ಇದೆ. ನಳ್ಳಿ ಉದುರುವುದು ಮುಂದುವರಿದು ಈಗ ಬೆಳೆದ ಅಡಿಕೆ ಬೀಳುವುದೂ ಕಂಡು ಬರುತ್ತಿದೆ”
-ಜಯಪ್ರಕಾಶ್ ಕೆ.
ಅಡಿಕೆ ಕೃಷಿಕರು. ಪೇರಾಲು

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಪ್ಯಾರಿ..ಪ್ಯಾರಿ..ಜಮ್ನಾ ಪ್ಯಾರಿ.. ಗಣಪಯ್ಯ ಭಟ್ ಮನೆಯಲ್ಲಿ ಜಮ್ನಾ ಪ್ಯಾರಿ ಆಡುಗಳ ಕಲರವ..
next post
ಅಂಕಣ-ಗಡಿನಾಡ ದಡದಿಂದ: ಪತ್ರಿಕಾ ಓದುಗರ ವ್ಯಥೆಯ ಮಾತು, ಇಂಥ ಮಾತನ್ನು ನಿರ್ಲಕ್ಷಿಸಿದರೆ ನಾಳೆ ಓದುಗರೆಲ್ಲಿಂದ..?!

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ...

June 5, 2023

ಮುಂದಿನ 48 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ ಸಾಧ್ಯತೆ:...

June 5, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ
  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ