ಸುಳ್ಯ:ಸುಳ್ಯ ರೋಟರಿ ಕ್ಲಬ್ಗೆ ದೊಡ್ಡ ಪರಂಪರೆ ಇದೆ.ಸೇವಾ ಕ್ಷೆತ್ರದಲ್ಲೂ ದೊಡ್ಡ ಹೆಸರಿದೆ. ಸೇವೆಯ ಮೂಲಕ ದೇವರಿಗೆ ಅತ್ಯಂತ ಪ್ರಿಯವಾದ ಕೆಲಸವನ್ನು ಸುಳ್ಯ ರೋಟರಿ ಸದಸ್ಯರು ಮಾಡಿದ್ದಾರೆ. ಈ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಸತೀಶ್ ಬೋಳಾರ್ ಹೇಳಿದ್ದಾರೆ.ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ

ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸುಳ್ಯ ರಥಬೀದಿಯ ರೋಟರಿ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷೆ ಲತಾ ಮಧುಸೂದನ್ ಅವರ ನೇತೃತ್ವದ ಹೊಸ ತಂಡ ಅಧಿಕಾರ ವಹಿಸಿಕೊಂಡರು.
ಮುಖ್ಯ ಅತಿಥಿ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮ್ ದತ್ತಾ ಮಾತನಾಡಿ ಒಟ್ಟಾಗಿ ಕೆಲಸ ಮಾಡಿದರೆ ಅದ್ಭುತಗಳನ್ನು ಸಾಧಿಸಬಹುದು.ರೋಟರಿ ಎಂದರೆ ಒಂದು ತಂಡದ ಕೆಲಸ. ರೋಟರಿಯ ಯಶಸ್ಸು ಸದಸ್ಯರ ಎಲ್ಲರ ಗೆಲುವು ಎಂದು ಹೇಳಿದರು. ಸುಳ್ಯ ರೋಟರಿ ಕ್ಲಬ್ ಒಂದು ತಂಡವಾಗಿ ಕೆಲಸ ಮಾಡಿ ರೋಟರಿ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಪಡೆಯುವಂತಾಗಲಿ, ಈ ವರ್ಷ ಸುವರ್ಣ ವರ್ಷವಾಗಲಿ ಎಂದು ಹಾರೈಸಿದರು.ಪುತ್ತೂರು ರೋಟರಿ ಕ್ಲಬ್ನ

ಅಧ್ಯಕ್ಷ ದತ್ತಾತ್ರೇಯ ರಾವ್ ಪದಗ್ರಹಣ ನೆರವೇರಿಸಿ ಮಾತನಾಡಿ ಸಮಾಜ ಸೇವೆ ಮಾಡಲು ರೋಟರಿ ಅತ್ಯುತ್ತಮ ವೇದಿಕೆ.ರೋಟರಿ ಮೂಲಕ ನೀಡುವ ಹಣ ಅರ್ಹರಿಗೆ ಸೇರುತ್ತದೆ. ತಮ್ಮ ಆದಾಯದ ಒಂದು ಅಂಶವನ್ನು ಸಮಾಜಕ್ಕೆ ಕೊಡುವ ಮೂಲಕ ತೃಪ್ತಿ ಪಡೆಯುವವರು ರೋಟೇರಿಯನ್ಸ್ ಎಂದು ಅವರು ಹೇಳಿದರು.
ರೋಟರಿ ಕ್ಲಬ್ನ ನೂತನ ಅಧ್ಯಕ್ಷೆ ಲತಾ ಮಧುಸೂದನ್ ಮಾತನಾಡಿ ಎಲ್ಲರ ಸಹಕಾರ ಕೋರಿದರು.ಮುಖ್ಯ ಅತಿಥಿಗಳಾಗಿ
ಶಾಸಕಿ ಭಾಗೀರಥಿ ಮುರುಳ್ಯ,ವಲಯ 5ರ ಅಸಿಸ್ಟೆಂಟ್ ಗವರ್ನರ್ ಆನಂದ ಖಂಡಿಗೆ, ಝೋನಲ್ ಲೆಪ್ಟಿನೆಂಟ್ ಗಿರೀಶ್ ನಾರ್ಕೋಡು ಭಾಗವಹಿಸಿದ್ದರು.ರೋಟರಿ ಕ್ಲಬ್ನ

ನಿರ್ಗಮನ ಅಧ್ಯಕ್ಷ ಡಾ.ರಾಮ್ಮೋಹನ್, ರೋಟರಿ ಕ್ಲಬ್ನ ಕಾರ್ಯದರ್ಶಿ ಹರಿರಾಯ ಕಾಮತ್, ರೋಟರಿ ಸರ್ಜಂಟ್ ಎಟ್ ಆರ್ಮ್ಸ್ ಮಧುಸೂದನ್ ಕುಂಭಕ್ಕೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಂಪೇ ಗೌಡ ಪ್ರಶಸ್ತಿ ವಿಜೇತರಾದ ಎಂ.ಮೀನಾಕ್ಷಿ ಗೌಡ ಅವರನ್ನು ಗೌರವಿಸಲಾಯಿತು. ಪವರ್ಮೆನ್ ಸಂತೋಷ್ ಚಾಂದಕವಠೆ, ನಾಟಿ ವೈದ್ಯೆ ಯಶೋಧಾ ಬೀರುಸಾಗು ಅವರನ್ನು ಸನ್ಮಾನಿಸಲಾಯಿತು. ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಹಾಗು ಪಿಯುಸಿ ಪರೀಕ್ಷೆಯಲ್ಲಿ

ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ,ಕಾರ್ಯದರ್ಶಿ ಕೆ.ಹರಿರಾಯ ಕಾಮತ್, ಕೋಶಾಧಿಕಾರಿ ನಳಿನಿ ಕಿರ್ಲಾಯ ಹಾಗು ಇತರ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಡಾ.ರಾಮ್ಮೋಹನ್ ಸ್ವಾಗತಿಸಿ, ಹರಿರಾಯ ಕಾಮತ್ ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.








