ಸುಳ್ಯ: ಗೂನಡ್ಕ ಹಿಮಾಯತುಲ್ ಇಸ್ಲಾಂ ಜಮಾಅತ್ ಈದ್ ಮಿಲಾದ್ ಸ್ವಾಗತ ಸಮಿತಿ ವತಿಯಿಂದ ಈದ್ ಮಿಲಾದ್2023 ಹಾಗೂ 12ನೇ ವಾರ್ಷಿಕ ಸ್ವಲಾತ್ ಮಜ್ಲಿಸ್ ಪ್ರಯುಕ್ತ ಮೂರು ದಿನಗಳ ಮಿಲಾದ್ ಫೆಸ್ಟ್ ಸರ್ವ ಧರ್ಮೀಯರ ಸ್ನೇಹ ಸಮ್ಮಿಲನ, ಸ್ವಲಾತ್ ಮಜ್ಲೀಸ್
ಸೆ.28ರಿಂದ 30ರ ತನಕ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎ.ಅಶ್ರಫ್(ಎ.ಟಿ.) ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ.28ರಂದು ಬೆಳಿಗ್ಗೆ
ಧ್ವಜಾರೋಹಣ, ಮಿಲಾದ್ ಸಂದೇಶ ಜಾಥಾ, ಮೌಲಿದ್ ಮಜ್ಲೀಸ್ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ರಿಂದ ಮದ್ರಸಾ ವಿದ್ಯಾರ್ಥಿಗಳಿಂದ ಮಿಲಾದ್ ಫೆಸ್ಟ್ ನಡೆಯಲಿದೆ.
ಸೆ.29ರಂದು ಸಂಜೆ 4.30 ರಿಂದ ಸರ್ವ ಧರ್ಮೀಯರ ಸ್ನೇಹ ಸಮ್ಮಿಲನ ನಡೆಯಲಿದೆ. ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಮಹಮ್ಮದಲಿ ಸಖಾಫಿ ದುವಾಃ ನೆರವೇರಿಸುವರು. ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸುವರು.ರಾಜಾರಾಂ ಕೀಲಾರು ಅಧ್ಯಕ್ಷತೆ ವಹಿಸುವರು. ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ, ಶಾಸಕ ಅಶೋಕ್ ಕುಮಾರ್ ರೈ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮೂಲ್ಕಿ, ಸಣ್ಣ ಕೈಗಾರಿಕಾ ನಿಗಮದ
![](https://thesulliamirror.com/wp-content/uploads/2023/09/IMG_20230923_151939.jpg)
ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ. ಬಿ. ಸದಾಶಿವ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಸಿ. ಜಯರಾಮ, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಬೈಲೆ ಶಿರಾಡಿ ದೈವಸ್ಥಾನದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಇಬ್ರಾಹಿಂ ಗೂನಡ್ಕ, ಕಾರ್ಮಿಕ ಮುಖಂಡರಾದ ಕೆ.ಪಿ. ಜಾನಿ ಕಲ್ಲುಗುಂಡಿ, ಬೆಂಗಳೂರು ಫಾರ್ಮೆಡ್ ಗ್ರೂಪಿನ ಹಿರಿಯ ಉಪಾಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಉದ್ಯಮಿ ಸತೀಶ್ ಡಿ.ವಿ., ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಕೆ.ಎಂ.ಮುಸ್ತಫ, ಕೆಪಿಸಿಸಿ ಸಂಯೋಜಕರಾದ ಎಸ್ ಸಂಶುದ್ದೀನ್, ಉದ್ಯಮಿ ಹಮೀದ್ ಕುತ್ತಮೊಟ್ಟೆ, ಗೂನಡ್ಕ ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ ಸಂಪಾಜೆಯ ವರ್ತಕ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ, ಚಿದಾನಂದ ಯುಎಸ್
ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ವಿಶೇಷ ಆಹ್ವಾನಿಕರಾಗಿ ಅರೆ ಭಾಷೆ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್.ಕೆ ಹನೀಫ್,
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಜಿ.ಹನುಮಂತಪ್ಪ ಮಾಸ್ಟರ್, ಪಿ ಎಲ್ ಸುರೇಶ್ ಹಾಜಿ ಪಿ.ಎ.ಉಮ್ಮರ್, ಸೂರಜ್ ಹೊಸೂರು, ನಿವೃತ ಸೈನಿಕರಾದ ನವೀನ್ ಬೈಲೆ ಭಾಗವಹಿಸಲಿದ್ದಾರೆ. ಗೂನಡ್ಕದ
ಅಲ್ ಅಮೀನ್ ಗೌರವಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಸೆಪ್ಟೆಂಬರ್ 30ರಂದು ರಾತ್ರಿ 7.30 ಕ್ಕೆ ನಡೆಯಲಿರುವ ವಾರ್ಷಿಕ ಸ್ವಲಾತ್ ಮಜ್ಲೀಸ್ನ ಅಧ್ಯಕ್ಷತೆಯನ್ನು ಮಿಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಎಸ್.ಎ ಅಶ್ರಫ್(ಎ.ಟಿ) ವಹಿಸುವರು. ಗೂನಡ್ಕ ಬಿಜೆಎಂ ಖತೀಬರಾದ ಮಹಮದ್ ಆಲಿ ಸಕಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಶಿಹಾಬುದ್ದೀನ್ ಆಲ್ ಅಹ್ದಲ್ ಮುತ್ತನ್ನೂರ್ ತಂಙಳ್ ಕೋಯಿಕೋಡ್ ಇವರು ಸ್ವಲಾತ್ ಮಜ್ಲೀಸ್ ನೇತೃತ್ವ ವಹಿಸುವರು. ಕಕ್ಕಿಂಜೆಯ ಖತೀಬರಾದ ಅಬೂಬಕರ್ ಸಿದ್ದಿಕ್ ಜಲಾಲಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಗಾಂಧಿನಗರ ಕೇಂದ್ರ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷರಾದ ಆದಂ ಹಾಜಿ ಕಮ್ಮಾಡಿ ಮೊಗರ್ಪಣೆ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸೀಫುಡ್, ಇರುವಂಬಳ್ಳ ಜಮಾಅತ್ ಅಧ್ಯಕ್ಷ ಎ.ಬಿ. ಅಶ್ರಫ್ ಸಅದಿ, ಎಸ್ಎಂಎ ಸುಳ್ಯ ರೀಜಿನಲ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ, ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಕಲ್ಲುಗುಂಡಿ ಎಂ ಜೆ ಎಂ ಅಧ್ಯಕ್ಷ ಹಾಜಿ ಅಬ್ಬಾಸ್ ಸೆಂಟ್ಯಾರ್, ಬಿಜೆಎಂ ಸಂಪಾಜೆಯ ಅಧ್ಯಕ್ಷ ತಾಜ್ ಮಹಮ್ಮದ್, ಪೆರಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಶಾಹಿದ್ ಪೆರಾಜೆ, ಕೊಯನಾಡು ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಜಾಕ್, ಅರಂತೋಡು ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ, ಎಚ್ಐಜೆ ಗೂನಡ್ಕದ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕೊಪ್ಪದಕಜೆ, ಬಾಲೆಂಬಿ ಸೆಂಟ್ಯಾರ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅಶ್ರಫ್ ಬಾಲೆಂಬಿ, ಗುತ್ತಿಗೆದಾರರಾದ ಇಸ್ಮಾಯಿಲ್ ಸಂಪಾಜೆ, ಕಲ್ಲುಗುಂಡಿಯ ಉದ್ಯಮಿ ಹಾಜಿ ಹಸೈನಾರ್, ಎಚ್ ಐ ಜೆ ಸಿ ಗೂನಡ್ಕ ಇದರ ಅಧ್ಯಕ್ಷರಾದ ಡಿ. ಆರ್. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿಗಳಾದ ಉಮ್ಮರ್ ಪುತ್ರಿ, ಕಲ್ಲು ಗುಂಡಿ ಸಿರಾಜುಲ್ ಇಸ್ಲಾಂ ಎಸೋಸಿಯೇಷನ್ ಅಧ್ಯಕ್ಷ ಎ.ಕೆ. ಇಬ್ರಾಹಿಂ ಇವರು ಗೌರವ ಉಪಸ್ಥಿತರಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಚ್ ಐ ಜೆ ಸಿ ಗೂನಡ್ಕ ಇದರ ಅಧ್ಯಕ್ಷರಾದ ಡಿ. ಆರ್. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಉಮ್ಮರ್ ಪುತ್ರಿ, ಮಾಜಿ ಅಧ್ಯಕ್ಷ ಹಾಜಿ ಉಮ್ಮರ್ ಪಿ.ಎ, ಅಲ್ ಅಮೀನ್ ಗೂನಡ್ಕದ ಗೌರವಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ಮಿಲಾದ್ ಸ್ವಾಗತ ಸಮಿತಿಯ ಸಂಚಾಲಕರಾದ ಪಿ.ಕೆ.ಅಬೂಸಾಲಿ,ಶೌವಾದ್ ಗೂನಡ್ಕ, ಉಪಸ್ಥಿತರಿದ್ದರು