*ಅನಿಲ್ ಎಚ್.ಟಿ.
ಯಾರ್ರೀ.. ಜಿ.ಟಿ.ಸಕ೯ಲ್.. ಬೇಗ ಇಳ್ಕೊಳ್ಳಿ..
ಇನ್ನೇನು ಬಸ್ ಸ್ಟಾಂಡ್ ತಲುಪುವ ಹೊತ್ತಿನ ಧಾವಂತದಲ್ಲಿರುವ ಬಸ್ ಕಂಡಕ್ಟರ್ ಹೀಗೆ ಹೇಳಿದನೆಂದರೇ .. ಜಿ.ಟಿ. ಸಕ೯ಲ್ ಅಥವಾ ಜನರಲ್ ತಿಮ್ಮಯ್ಯ ಸಕ೯ಲ್ ಬಂದೇಬಿಟ್ಟಿತು. ಜತೆಗೇ ಮಡಿಕೇರಿ ತಲುಪಿಯಾಯಿತು ಎಂಬ ಭಾವನೆ ಪ್ರಯಾಣಿಕರಿಗೆ.
ಹೌದು.. ಹಲವಾರು ವಷ೯ಗಳಿಂದಲೂ ಜನರಲ್ ತಿಮ್ಮಯ್ಯ ಸರ್ಕಲ್ ಎಂಬುದು ಮಡಿಕೇರಿಯ ಪ್ರವೇಶ ಸ್ಥಳದಂತಿದೆ. ತಿಮ್ಮಯ್ಯ ಪ್ರತಿಮೆ ಬಳಿಯಿಂದಲೇ ಮಡಿಕೇರಿ ನಗರದೊಳಕ್ಕೆ ಪ್ರವೇಶಿಸಿದರೆ ಅದೇನೋ ರೋಮಾಂಚನ.. ವೀರಸೇನಾನಿಯ ಪ್ರತಿಮೆ ಗಮನಿಸಿಕೊಂಡು ಮಡಿಕೇರಿ
ಸೇರಿದ್ದೇವೆ ಎಂಬ ಸುರಕ್ಷತೆಯ ಭಾವನೆಯೊಂದಿಗೆ ನಗರದೊಳಕ್ಕೆ ಸ್ಥಳೀಯರು ಪ್ರವೇಶಿಸುತ್ತಿದ್ದರು. ತಿಮ್ಮಯ್ಯ ಸಕ೯ಲ್ ತಲುಪಿದೆವು ಎಂದಾದರೆ ಮಡಿಕೇರಿ ಮುಟ್ಟಿದೆವು ಎಂದೇ ಅಥ೯.!
ಸೇನಾ ಧಿರಿಸಿನಲ್ಲಿ ಶಿಸ್ತುಬದ್ದ ಅಧಿಕಾರಿಯಾಗಿ ನಿಂತಿರುವ ತಿಮ್ಮಯ್ಯ ಅವರ ಪ್ರತಿಮೆ ನಿಜಕ್ಕೂ ಕಣ್ಣನ ಸೆಳೆಯುವಂತಿತ್ತು, ಮಿರಮಿರನೆ ಕಪ್ಪುಬಣ್ಣದ ಲೋಹದಲ್ಲಿ ನಿಮಿ೯ತವಾಗಿದ್ದ ಈ ಪ್ರತಿಮೆಯು ಕೊಡಗಿನ ಸೇನಾ ಪರಂಪರೆಯನ್ನು ಸಾಕ್ಷೀಕರಿಸುತ್ತಿತ್ತು. ಕೊಡಗಿನವರ ಗತ್ತುಗೈರತ್ತಿನ ಪ್ರತಿಬಿಂಬದಂತೆ ತಿಮ್ಮಯ್ಯ ಅವರ ಶಿಸ್ತಿನ ಪ್ರತಿರೂಪದ ಮೂತಿ೯ ಕಂಗೊಳಿಸುತ್ತಿತ್ತು.
ಆದರೆ ಆಗಸ್ಟ್ 21 ರಂದು ಸೋಮವಾರ ಬೆಳಗ್ಗೆ 5.45 ಗಂಟೆಗೆ ಸಕಾ೯ರಿ ಬಸ್ ಡಿಪೋದಿಂದ ಕೊಂಚ ತಡವಾಗಿ ನಿಲ್ದಾಣಕ್ಕೆ ಹೊರಟಿದ್ದ ಬಸ್ ಚಾಲಕನಿಗೆ ಅದೇನಾಯಿತೋ… ಸಕಾ೯ರಿ ಜಿಲ್ಲಾಸ್ಪತ್ರೆ ದಾಟಿದ ಕೂಡಲೇ ಮತ್ತಷ್ಟು ವೇಗ ಪಡೆದುಬಿಟ್ಟ. ಜಿ.ಟಿ.ಸಕ೯ಲ್ ಬಳಿಯ ಆಟೋ ಸ್ಟಾಂಡ್ ತಲುಪುತ್ತಿದ್ದಂತೆಯೇ ಮಂಗಳೂರು ರೋಡ್ ನಿಂದ ಪಿಕ್ ಅಪ್ ಜೀಪ್ ತಿರುವು ದಾಟಿಕೊಂಡು ಬಸ್ ಗೆ ಎದುರಾಯಿತು. ಈ ಜೀಪ್ ನ್ನು ತಪ್ಪಿಸಲು ಬೇರೆ ಮಾಗ೯ವಿಲ್ಲದಂತೆ ಮೊದಲೇ ತಡವಾಗಿದ್ದ ಗಡಿಬಿಡಿಯಲ್ಲಿದ್ದ ಬಸ್ ಚಾಲಕ ನೇರವಾಗಿ ತಿಮ್ಮಯ್ಯ ಪ್ರತಿಮೆಗೇ ಬಸ್ ಡಿಕ್ಕಿ ಮಾಡಿಬಿಟ್ಟಿದ್ದ. ಬಸ್ ನೊಳಗಿದ್ದ ಕಂಡಕ್ಟರ್ ಥೇಟ್ ಸಿನಿಮಾ ಶೈಲಿಯಲ್ಲಿ ಬಸ್ ನಿಂದ ಹೊರಬಿದ್ದುಬಿಟ್ಟಿದ್ದ.
ತಿಮ್ಮಯ್ಯ ಪ್ರತಿಮೆಯ ಹಿಂಬದಿ ಐದಾರು ತೂತುಗಳಾಯಿತು. ಕಾಲಿನ ಭಾಗ ಕೊಂಚ ಜಖಂ ಆಯಿತು. ಆವರಣ ಬೇಲಿ ಹಾನಿಗೊಳಗಾಯಿತು. ಪ್ರತಿಮೆ ನಿಂತಿದ್ದ ಸ್ಥಂಭ ಕೂಡ ಹಾನಿಗೊಳಗಾಯಿತು. ಇಷ್ಟೆಲ್ಲಾ ಆಗಬೇಕಾದರೆ ಪೂಣ೯ ಬೆಳಕಾಗಿತ್ತು. ಜನ ಎಚ್ಚತ್ತುಕೊಂಡಾಗ ವಿಷಯದ ಬ್ರೇಕಿಂಗ್ ನ್ಯೂಸ್ ಹರಿದಾಡತೊಡಗಿತ್ತು.
ತಡಮಾಡದೇ ಪೊಲೀಸರು, ನಗರಸಭೆಯವರು ಸ್ಥಳೀಯರು ತಿಮ್ಮಯ್ಯ ಪ್ರತಿಮೆಯನ್ನು ತಿಮ್ಮಯ್ಯ ಅವರು ಜನಿಸಿದ್ದ ಸನ್ನಿಸೈಡ್ ಮನೆಗೆ ಕ್ರೇನ್ ಮೂಲಕ ಸ್ಥಳಾಂತರಿಸಿದರು. ಆಮೇಲೆ ಆದ ಬೆಳವಣಿಗೆಗಳೆಂದರೆ.. ಸುರಕ್ಷಿತವಾಗಿ ತಿಮ್ಮಯ್ಯ ವೖತ್ತದ ಬಳಿಯಿರುವ ತಿಮ್ಮಯ್ಯ ಹುಟ್ಟಿದ ಮನೆ ಸನ್ನಿಸೈಡ್ ನಲ್ಲಿ ಪ್ರಸ್ತುತ ಪ್ರತಿಮೆ ಇರಿಸಲಾಗಿದೆ. ಹಿತ್ತಾಳೆ ಪ್ರತಿಮೆಯ ಹಿಂಬದಿ ತೂತುಗಳಾಗಿದ್ದು, ದುರಸ್ಥಿಪಡಿಸಬೇಕಾಗಿದೆ.
ಪ್ರತಿಮೆ ಸ್ಥಾಪನೆಯ ಹಿಂದಿನ ಕಥೆ:
ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಅವರು ಮಡಿಕೇರಿ ಪುರಸಭೆಯ ಅಧ್ಯಕ್ಷರಾಗಿದ್ದಾಗ ಕಂಡ ಕನಸಿದು.ಮಿಲಿಟರಿಯಲ್ಲಿ ಜನರಲ್ ಆಗಿದ್ದ ತಿಮ್ಮಯ್ಯ ಅವರ ಪ್ರತಿಮೆ ಮಡಿಕೇರಿಯಲ್ಲಿರಲೇಬೇಕು ಎಂದು ಚಿಂತಿಸಿದ್ದ ನಾಣಯ್ಯ.ಭಾರತದ ಯುವಜನತೆ ಮತ್ತು ಸೇನಾಪಡೆಯ ಅಧಿಕಾರಿಗಳು, ಸೈನಿಕರ ಪ್ರೀತಿಗೆ ಪಾತ್ರರಾಗಿದ್ದ ತಿಮ್ಮಯ್ಯ ಪ್ರತಿಮೆ ಅವಶ್ಯಕ ಎಂದು ಛಲ ತೊಟ್ಟಿದ್ದ ನಾಣಯ್ಯ ಪುರಸಭೆಯ ಸದಸ್ಯರ ಅಂಗೀಕಾರ ಪಡೆದು ಪ್ರತಿಮೆ ಸ್ಥಾಪನೆಗೆ ಮುಂದಾದ ಎಂ.ಸಿ.ನಾಣಯ್ಯ.
ಪ್ರತಿಮೆ ಸ್ಥಾಪನೆಗೆ ಆಥಿ೯ಕ ನೆರವು ನೀಡುವವರೇ ಇಲ್ಲದೆ ಹತಾಶರಾದ ಸಂದಭ೯ ಅಂದಿನ ರಾಜ್ಯಪಾಲ ಧಮ೯ವೀರ 10 ಸಾವಿರ ರು. ನೀಡಿದರು.
ಸೇನಾ ಸಮವಸ್ತ್ರದಲ್ಲಿ ತಿಮ್ಮಯ್ಯ ನಿಂತಿರುವ ಭಂಗಿಯ ಚಿತ್ರಕ್ಕಾಗಿ ಯು.ಎನ್.ಓ. ಸಂಸ್ಥೆಗೆ ಪತ್ರ ಬರೆದು ಕೋರಿದ ನಾಣಯ್ಯ
ನಾಣಯ್ಯ ಯೋಜನೆ ಮೆಚ್ಚಿ ಯು.ಎನ್.ಓ.ದಿಂದ ತಿಮ್ಮಯ್ಯ ಅವರ ಸೇನಾ ಸಮವಸ್ತ್ರದಲ್ಲಿರುವ ಅನೇಕ ಚಿತ್ರಗಳು ಲಭಿಸುವಂತಾದವು.
ಮುಂಬೈನ ಖ್ಯಾತ ಶಿಲ್ಪಿ ವಾಗ್ ಅವರನ್ನು ಸಂಪಕಿ೯ಸಿ ಪ್ರತಿಮೆ ನಿಮಿ೯ಸಿಕೊಡುವಂತೆ ಕೋರಿದ ನಾಣಯ್ಯ ಜನರಲ್ ತಿಮ್ಮಯ್ಯ ಬಗ್ಗೆ ಸದಾಭಿಪ್ರಾಯ ಹೊಂದಿದ್ದ ವಾಗ್ 50 ಸಾವಿರ ರು. ಸಂಭಾವನೆಯಲ್ಲಿ 20 ಸಾವಿರ ಕಮ್ಮಿ ಮಾಡಿ 30 ಸಾವಿರ ರು.ಗೆ ಹಿತ್ತಾಳೆ ಲೋಹದ ಪ್ರತಿಮೆ ನಿಮಿ೯ಸಿದರು.ಮುಂಬೈನಲ್ಲಿದ್ದ ಕೋದಂಡ ಕುಟುಂಬದ ಮಹಿಳೆಯರೀವ೯ರು ಪ್ರತಿಮೆ ನಿಮಾ೯ಣದ ಸಂದಭ೯ ಉಸ್ತುವಾರಿ ವಹಿಸಿಕೊಂಡರು. 6 ತಿಂಗಳಿನಲ್ಲಿಯೇ ನಿಮಾ೯ಣವಾದ ಕಂಚಿನ ಪ್ರತಿಮೆ ರಾಜ್ಯದ ಕೈಗಾರಿಕಾ ಸಚಿವರಾಗಿದ್ದ ಎಸ್.ಎಂ.ಕೖಷ್ಣ ಅವರನ್ನು ಭೇಟಿಯಾಗಿ ಹಿರಿಯ ಸೇನಾಧಿಕಾರಿ ಮಾಣಿಕ್ ಷಾ ಅವರನ್ನು ಪ್ರತಿಮೆ ಅನಾವರಣಕ್ಕೆ ಬರುವಂತೆ ಮಾಡಿದ ನಾಣಯ್ಯ. 1973 ರ ಮಾಚ್೯ 20 ರಂದು ಮಡಿಕೇರಿಯ ಹೖದಯಭಾಗದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆ ಅನಾವರಣಗೊಂಡಿತ್ತು. ತಿಮ್ಮಯ್ಯ ಪ್ರತಿಮೆ ಸ್ಥಾಪನೆಯಾಗಿ ಈಗ 50 ವಷ೯ಗಳಾಗಿದೆ.ರಾಜ್ಯ ಸಕಾ೯ರದ ಅತಿಥಿಯಾಗಿ ಮಡಿಕೇರಿಗೆ ತಿಮ್ಮಯ್ಯ ಪ್ರತಿಮೆ ಅನಾವರಣಕ್ಕೆ ಪತ್ನಿಯೊಂದಿಗೆ ಮಾಣಿಕ್ ಷಾ ಬಂದಿದ್ದರು.
ತಿಮ್ಮಯ್ಯ ಸಕ೯ಲ್ ಅಥವಾ ಜಿ.ಟಿ. ಸಕ೯ಲ್ ಎಂದೇ ಕರೆಯಲ್ಪಡುವ ಈ ವೖತ್ತದಲ್ಲಿದ್ದ ತಿಮ್ಮಯ್ಯ ಪ್ರತಿಮೆ ಅಡಿಯಲ್ಲಿ ಅಂದು ಪ್ರತಿಮೆ ನಿಮಾ೯ಣಕ್ಕೆ ಕಾರಣರಾದ ಎಂ.ಸಿ.ನಾಣಯ್ಯ ಅವರು ಹೆಸರು ಇಲ್ಲವೇ ಇಲ್ಲ.
ಎರಡು ವಷ೯ಗಳ ಕಾಲ ತಿಮ್ಮಯ್ಯ ಪ್ರತಿಮೆ ನಿಮಾ೯ಣಕ್ಕೆ ಶ್ರಮಿಸಿದ್ದ ಎಂ.ಸಿ.ನಾಣಯ್ಯ ತಮ್ಮ ಹೆಸರನ್ನು ಪ್ರತಿಮೆ ಸ್ಥಳದಲ್ಲಿ ದಾಖಲೆಯಾಗಿ ಹಾಕಿಕೊಳ್ಳಲು ಇಚ್ಚಿಸಲೇ ಇಲ್ಲಜನರಲ್ ತಿಮ್ಮಯ್ಯ ಹೆಸರು ಇರುವುದು ಮುಖ್ಯವೇ ಹೊರತು ನನ್ನ ಹೆಸರಲ್ಲ ಎಂದು ನಾಣಯ್ಯ ಭಾವಿಸಿದ್ದರು. ಹೀಗಾಗಿ ಹೆಸರಿನ ಬಗ್ಗೆ ಆಸಕ್ತಿ ತೋರಲಿಲ್ಲ.
(ನೆನಪುಗಳು ಮಾಸುವ ಮುನ್ನ ಕೖತಿಯ ಆಧಾರ )
‘ಮಡಿಕೇರಿ ನಗರಸಭೆಯ ಉಸ್ತುವಾರಿಯಲ್ಲಿರುವ ಜನರಲ್ ತಿಮ್ಮಯ್ಯ ಪ್ರತಿಮೆ ಮರುಸ್ಥಾಪನೆ ಸಂಬಂಧಿತ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ ಎಂದು ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಹೇಳಿದ್ದಾರೆ.
ಕೊಡಗಿನಲ್ಲಿ 50 ವಷ೯ಗಳ ಹಿಂದೆ ಅದ್ಬುತ ಪ್ರತಿಮೆಯಾಗಿ ಇದನ್ನು ಸ್ಥಾಪಿಸಿದ್ದೇವೆ. ಈ ಪ್ರತಿಮೆ ಮರುಸ್ಥಾಪನೆಗೆ ಮಡಿಕೇರಿ ನಗರಸಬೆ ವಿಳಂಭವಿಲ್ಲದಂತೆ ಕ್ರಮಕೈಗೊಳ್ಳಲೇಬೇಕು ಎಂದು ಪ್ರತಿಮೆ ನಿರ್ಮಾಣಕ್ಕೆ ಕಾರಣವಾಗಿದ್ದ ಎಂ.ಸಿ.ನಾಣಯ್ಯ ಹೇಳಿದ್ದಾರೆ.
ವಿಳಂಬ ಮಾಡದೆ ಪ್ರತಿಮೆ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಶಾಸಕರಾದ ಡಾ.ಮಂಥರ್ ಗೌಡ ಹೇಳಿದ್ದಾರೆ.
ತಿಮ್ಮಯ್ಯ ಪ್ರತಿಮೆ ಕಾಣದೇ ಮಡಿಕೇರಿ ಪ್ರವೇಶವೇ ಬಿಕೋ ಎನ್ನುತ್ತಿದೆ.
ಸಂಭ್ರಮಾಚರಣೆ.. ವಿಜಯೋತ್ಸವ.. ಪ್ರತಿಭಟನೆ.. ಬಂದ್.. ಹೀಗೆ ಕೊಡಗಿನ ಅಥವಾ ಮಡಿಕೇರಿಯ ಪ್ರಮುಖ ಘಟನೆಗಳ ಸಾಕ್ಷೀಭೂತವಾಗಿರುವ ತಿಮ್ಮಯ್ಯ ಪ್ರತಿಮೆ ಇಲ್ಲದೇ ಚಳವಳಿಗಳು.. ವಿಜಯೋತ್ಸವಗಳಿಗೆ ಕಳೆಯೇ ಇಲ್ಲ. ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದ ಪ್ರತಿಮೆಯೇ ಇಲ್ಲಿಲ್ಲ..!! ಜಿ.ಟಿ. ಸಕ೯ಲ್ ಬಂದರೂ ಈ ಸಕ೯ಲ್ ನಲ್ಲಿ ತಿಮ್ಮಯ್ಯ ಪ್ರತಿಮೆಯೇ ಇಲ್ಲ. ಪ್ರಯಾಣಿಕರಂತೂ ತಬ್ಬಿಬ್ಬು..!!! ತಿಮ್ಮಯ್ಯ ಸ್ಮರಣೆಯ ಪ್ರತಿಮೆ ಇಲ್ಲದ ಮಡಿಕೇರಿಯನ್ನು ಊಹಿಸಿಕೊಳ್ಳುವುದು ಕಷ್ಟ. ಕಷ್ಟ…
ಅನಿಲ್ ಎಚ್.ಟಿ.
(ಅನಿಲ್ ಎಚ್.ಟಿ.ಹಿರಿಯ ಪತ್ರಕರ್ತರು. ಅಂಕಣಕಾರರು)