ಸುಳ್ಯ: ದ ಕ ಜಿಲ್ಲಾ ಸಾಹಿತ್ಯ ಪರಿಷತ್,ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ,ಸುಳ್ಯ ಹೋಬಳಿ ಘಟಕಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸದ ಸವಿ ನೆನಪಿಗಾಗಿ ಕರ್ನಾಟಕದ ಜ್ಞಾನಪೀಠ ಪುರಸ್ಕೃತರ

ಭಾವಚಿತ್ರಗಳನ್ನು ತಾಲೂಕಿನ 105 ವಿದ್ಯಾ ಸಂಸ್ಥೆಗಳಿಗೆ ವಿತರಿಸುವ ಕಾರ್ಯಕ್ರಮವನ್ನು ಅಜ್ಜಾವರ ಮತ್ತು ಮಂಡೆಕೋಲು ಗ್ರಾಮಗಳ ಹತ್ತು ಶಾಲೆಗಳಿಗೆ ಪ್ರಾಯೋಜಕರ ಸಮ್ಮುಖದಲ್ಲಿ ನಡೆಸಲಾಯಿತು. ಕಸಾಪ ಸುಳ್ಯ ಘಟಕದ ಕಾರ್ಯಕಾರಿಣಿ ಸದಸ್ಯರಾದ ಶಶ್ಮಿಭಟ್ ಅಜ್ಜಾವರ ಮತ್ತು ಸಾವಿತ್ರಿ ಕಣೆಮರಡ್ಕ ನೇತೃತ್ವದಲ್ಲಿ ವಿತರಿಸಲಾಯಿತು. ಗೋಪಿನಾಥ್ ಮೆತ್ತಡ್ಕ, ಕೇಶವ.ಸಿ ಎ ಮತ್ತು ದ. ಕ ಜಿಲ್ಲಾ ಸದಸ್ಯರಾದ ರಾಮಚಂದ್ರ ಪಲ್ಲತಡ್ಕ ಸಹಕರಿಸಿದರು. ನಿರಂಜನ್ ಎಂ ಡಿ, ಮಧುರ ಎಂ ಆರ್, ಗೋಪಿನಾಥ್ ಮೆತ್ತಡ್ಕ, ಸಾವಿತ್ರಿ ಕಣೆಮರಡ್ಕ, ಸಿ. ಎ ಬ್ಯಾಂಕ್ ಸುಳ್ಯ ,ರಾಮಕೃಷ್ಣ ಗೌಡ,
ರಾಮಚಂದ್ರ ಪಲ್ಲತ್ತಡ್ಕ ಇವರುಗಳು ಜ್ಞಾನಪೀಠ ಪುರಸ್ಕೃತ ಭಾವಚಿತ್ರದ ಪ್ರಾಯೋಜಕರಾಗಿ ಸಹಕರಿಸಿದರು.