ಸುಳ್ಯ: ಚಂದ್ರಯಾನ 3 ಇದರ ಯಶಸ್ಸಿನಲ್ಲಿ ಕಾರ್ಯನಿರ್ವಹಿಸಿದ್ದ ಇಸ್ರೊ ವಿಜ್ಞಾನಿ ಸುಳ್ಯ ಉಬರಡ್ಕ ಗ್ರಾಮದ ವೇಣುಗೋಪಾಲ್ ಭಟ್ ಅವರ ಮನೆಗೆ ಸುಳ್ಯದ ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ನೀಡಿತು. ವೇಣುಗೋಪಾಲ್ ಭಟ್ ಅವರ ತಂದೆ- ತಾಯಿ ಅನಂತೇಶ್ವರ ಭಟ್- ಸಾವಿತ್ರಿ ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಶಾಲು ಹೊದಿಸಿ, ಫಲ ಪುಷ್ಪ ನೀಡಿ ಆತ್ಮೀಯವಾಗಿ ಗೌರವಿಸಿದರು. ಚಂದ್ರಯಾನ ಕಾರ್ಯದಲ್ಲಿ ಸುಳ್ಯದ
ವಿಜ್ಞಾನಿಗಳು ಸಹ ಭಾಗವಹಿಸಿ ತಮ್ಮ ಸೇವೆಯನ್ನು ಒದಗಿಸಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ವೇಣುಗೋಪಾಲ್ ಭಟ್ ರವರ ಅನುಪಸ್ಥಿತಿಯಲ್ಲಿ ಅವರ ಕುಟುಂಬ ಸದಸ್ಯರು ಅದರಲ್ಲೂ ಅವರ ತಂದೆ ತಾಯಿಗೆ ಸನ್ಮಾನಿಸಿ ಗೌರವಿಸುವುದು ನಮ್ಮ ಭಾಗ್ಯ ಮತ್ತು ಕರ್ತವ್ಯ ಎಂದು ವೆಂಕಪ್ಪ ಗೌಡ ಹೇಳಿದರು. ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸುಳ್ಯದ ಎಲ್ಲಾ ವಿಜ್ಞಾನಿಗಳಿಗೆ ಮಂತ್ರಿಗಳನ್ನು ಕರೆಯಿಸಿ ಸಾರ್ವಜನಿಕವಾಗಿ ಸನ್ಮಾನ ಮಾಡಲಾಗುವುದು ಎಂದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಿತ್ರಾವತಿ, ಉಬರಡ್ಕ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಗೌಡ, ಉಬರಡ್ಕ ನರಸಿಂಹ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಜತ್ತಪ್ಪ ಗೌಡ ಶರವು, ಪ್ರಮುಖರಾದ ಕೆ ಗೋಕುಲ್ದಾಸ್, ಶಶಿಧರ್ ಎಂ ಜೆ, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕ, ಪ್ರಮುಖರಾದ ವಿಜಯ ಕುಮಾರ್ ಆಲೆಟ್ಟಿ, ಜಗನ್ನಾಥ ಶೆಟ್ಟಿ ಉಬರಡ್ಕ, ಗಂಗಾಧರ ನಾಯರ್, ರಾಧಾಕೃಷ್ಣ ದಾಸ್, ಗುಡ್ಡಪ್ಪ ಕೇದಂಬಾಡಿ, ಸಂಜೀವ ಬಡ್ಡೆ ಕಲ್ಲು, ಭುವನೇದ್ರ ದಾಸ್, ಬಾಲಚಂದ್ರ ಶೆಟ್ಟಿ ಹಿತ್ಲು, ಬಾಲಪ್ರಕಾಶ ಶೆಟ್ಟಿಹಿತ್ಲು, ಗೋಪಾಲ ಕೃಷ್ಣ ಶೆಟ್ಟಿ ಹಿತ್ಲು, ಸತೀಶ್ಚಂದ್ರ ಪಟ್ರುಕೋಡಿ, ಅರುಣ ಕುಮಾರ್, ಶೀನಪ್ಪ, ಗಣೇಶ ಪಾಲಡ್ಕ, ಶುಭಕರ ನಾಯಕ್, ಚೇತನ್ ಅಮೈ, ರವಿರಾಜ್ ರಾವ್ ಕಂಬಳಿಮೂಲೆ, ಚಂದ್ರಶೇಖರ ಮಧೂರು ಮೂಲೆ, ಪ್ರವೀಣ್ ಕ್ರಾಸ್ತ, ವೇಣುಗೋಪಾಲ್ ಭಟ್ ರವರ ಸಹೋದರ ಈಶ್ವರ ಕುಮಾರ್, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು. ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಅಮೈ ವಂದಿಸಿದರು.