ಸಂಪಾಜೆ:ಸಂಪಾಜೆ ವಲಯ ಕಾಂಗ್ರೇಸ್ ಸಮಿತಿಯ ವತಿಯಿಂದ ಕಾರ್ಯಕರ್ತರ ಸಭೆ ಸಂಪಾಜೆ ಸಹಕಾರ ಸಭಾಭವನದಲ್ಲಿ ನಡೆಯಿತು.
ವಿರಾಜೇಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಭಾಗವಹಿಸಿ ಮಾತನಾಡಿದರು.
ಪೊನ್ನಣ್ಣ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕೊಡಗು ಸಂಪಾಜೆ ವಲಯ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಪಿ. ಎಲ್. ಸುರೇಶ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ
ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೇಸ್ ವಕ್ತಾರ ಟಿ. ಪಿ. ರಮೇಶ್, ಗಿರೀಶ್ ಕೊಲ್ಯದ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್,ಸುರೇಶ ಪೆರುಮುಂಡ,ಸೂರಜ್ ಹೊಸೂರ್,ಸಂಪಾಜೆ ಬೂತ್ ಅಧ್ಯಕ್ಷ ರೀತಿನ್ ಡೆಮ್ಮಲೆ, ದ.ಕ. ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್, ಮಹಮ್ಮದ್ ಕುಂಞಿ ಗೂನಡ್ಕ, ಪಿ.ಕೆ.ಅಬೂಸಾಲಿ, ಶೌವಾದ್ ಗೂನಡ್ಕ, ಎಸ್. ಕೆ. ಹನೀಫ್, ಕೆ.ಪಿ.ಜಾನಿ, ಏನ್. ಸಿ ಮನೋಹರ, ಹೆಚ್. ಬಿ. ಸುಂದರ, ಪಕ್ಷದ ಮುಖಂಡರಾದ ಅದಂ ಎಸ್, ಮೊಯಿದು ಕುಂಞಿ, ಕೊಯಿನಾಡು ಬೂತ್ ಅಧ್ಯಕ್ಷ ಎಂ. ಪಿ. ವಾಸು, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಕೆ. ಕೆ. ರಾಜೇಶ್ವರಿ ಇದ್ದರು. ಎ. ಪಿ.ಹನೀಫ್ ಸ್ವಾಗತಿಸಿದರು.