ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳಾದ ಲಯನ್ಸ್ ಕ್ಲಬ್, ಯಶಸ್ವಿ ಯುವಕ ಮಂಡಲ, ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟ, ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರದಲ್ಲಿ. ಗ್ರಾಮದಾದ್ಯಂತ ಬ್ರಹತ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಲ್ಲುಗುಂಡಿ ಪೇಟೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ
ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಜಗದೀಶ್ ರೈ, ಅಬೂಸಾಲಿ, ಎಸ್. ಕೆ. ಹನೀಫ್, ವಿಜಯ ಕುಮಾರ್, ಮಾಜಿ ಅಧ್ಯಕ್ಷೆ ಯಮುನಾ ಬಿ. ಎಸ್. ತೆಕ್ಕಿಲ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನಕರ ಸಣ್ಣಮನೆ, ಲಯನ್ಸ್ ಕ್ಲಬ್ ಅಧ್ಯಕ್ಷೆ ನಳಿನಿ ಕಿಶೋರ್, ಗ್ರಾಮ ವನ್ ಕೇಂದ್ರದ ಕಿಶೋರ್ ಕುಮಾರ್, ಪ್ರಶಾಂತ್. ವಿ.ವಿ, ಸುರೇಶ್, ಉದ್ಯಮಿ ಕಿಶೋರ್ ಕುಮಾರ್, ಶಿವರಾಮ್, ಯಶಸ್ವಿ ಯುವಕ ಮಂಡಲದ ಯೋಗೀಶ್, ಪ್ರಕಾಶ್ ರೈ, ವಿಜಯ ನಿಡಿಂಜಿ, ಪುರುಷೋತ್ತಮ್ ಜನತಾ ಕಾಲನಿ ಕ್ಷೇಮ್, ನಿತಿನ್ ಕುಮಾರ್ ನವೀನ್ ವರ್ತಕರ ಸಂಘದ ಕಾರ್ಯದರ್ಶಿ ರಝಕ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಎ. ಕೆ. ಇಬ್ರಾಹಿಂ, ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್. ಯಶೋದಾ, ಸೌಮ್ಯ,ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಆಶಾ ಕಾರ್ಯಕರ್ತೆ ಪ್ರೇಮಲತಾ, ಸೌಮ್ಯ, ಉಮೇಶ್. ಭರತ್, ನಾಗೇಶ್ ಬೇಕರಿ ಭೋಜಪ್ಪ ಗುರುವಪ್ಪ,ಮೊದಲದವರು ಭಾಗವಹಿಸಿ ಸ್ವಚ್ಛತಾ, ಕಾರ್ಯಕ್ರಮದಲ್ಲಿ ಸಹಕರಿಸಿದರು. ಅಲ್ಲದೆ ಶಾಲಾ ಕೇಂದ್ರಗಳಲ್ಲಿ ಆಡಳಿತ ಮಂಡಳಿ ಅಧ್ಯಾಪಕರು, ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.