ಸುಳ್ಯ: ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳಿಗಾಗಿ ಮರ್ಕಂಜದ ಮಂಜುನಾಥ ಆಚಾರ್ ಅವರ ಗದ್ದೆಯಲ್ಲಿ ಕೆಸರುಗದ್ದೆಯಲ್ಲಿ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಹರಿಪ್ರಸಾದ್ ಪನ್ನೆ ಮತ್ತು ಪತ್ರಕರ್ತೆ ಭವ್ಯ ಬೊಳ್ಳೂರು ಅವರು
ದೀಪ ಬೆಳಗಿಸಿ, ಹಿಂಗಾರವನ್ನು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆಯ ನೀಡಿದರು.ಬಳಿಕ 10ನೇ ತರಗತಿಯ ವಂಶಿ ಪಿ.ಎಂ ‘ ಕೆಸರುಗದ್ದೆಯಲ್ಲಿ ಆಟವಾಡುವುದರಿಂದ ಚರ್ಮರೋಗಗಳು ದೂರವಾಗಿ ಆರೋಗ್ಯ ವೃದ್ದಿಯಾಗುತ್ತದೆ ‘ ಎಂಬ ವೈಜ್ಞಾನಿಕ ಕಾರಣದ ಬಗ್ಗೆ ತಿಳಿಸಿದಳು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿ ‘ ಕೆಸರುಗದ್ದೆ ಆಟದಿಂದ

ಉಂಟಾಗುವ ಆರೋಗ್ಯ ವೃದ್ಧಿಯ ಬಗ್ಗೆ ಮತ್ತು ಅದರಿಂದ ವಿದ್ಯಾರ್ಥಿಗಳಿಗೆ ಆಗುವ ಮನೋರಂಜನೆಯ ಕುರಿತು ತಿಳಿಸಿದರು. ಮಕ್ಕಳ ಸಂತೋಷಕ್ಕೆ ಗದ್ದೆಯನ್ನು ಕಲ್ಪಿಸಿಕೊಟ್ಟ ಮಂಜುನಾಥ್ ಆಚಾರ್ ಅವರ ಮಗ ಹರಿಪ್ರಸಾದ್ ಪನ್ನೆ ಇವರಿಗೆ ಗೌರವಾರ್ಪಣೆ ಮಾಡಲಾಯಿತು. ಭವ್ಯ ಬೊಳ್ಳೂರು ಶುಭ ಹಾರೈಸಿದರು. ಬಳಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಸುಗ್ಗಿ ಹಾಡು ನೃತ್ಯ ಮಾಡಿ, ಕೆಸರುಗದ್ದೆಯಲ್ಲಿ ನೇಜಿ ನೆಟ್ಟು, ಓ ಬೇಲೆ..ಹಾಡಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಹತ್ತನೇ ತರಗತಿಯ ತನ್ವಿ ಜೆ ನಾಯಕ್ ಮತ್ತು ಮನ್ವಿತ್ ಕಾರ್ಯಕ್ರಮ ನಿರೂಪಿಸಿದರು. ಅದ್ವೈತ್ ಸ್ವಾಗತಿಸಿ ಅರುಂಧತಿ ವಂದಿಸಿದಳು. ಹಿಮಕರ ಬೂಡು ಮತ್ತು ನವೀನ ನಳಿಯಾರ ಊಟದ ವ್ಯವಸ್ಥೆಯನ್ನು, ಹರೀಶ ಕಂಜಿಪಿಲಿ, ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ದೋಳ ಮತ್ತು ಶಿಕ್ಷಕಿ ಅನಿತಾ ಸಿಹಿ ತಿಂಡಿ ವಿತರಣೆ ಮಾಡಿದರು. ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು, ಊರಿನ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.