ಮಡಿಕೇರಿ: ಶ್ರೀರಾಮ ತನ್ನ ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ ಅನುಸರಿಸುತ್ತಿದ್ದ ಆದಶ೯ ಮತ್ತು ಪ್ರೀತಿಯ ಅಂಶಗಳೇ ಅವನನ್ನು ಭಾರತ ಮಾತ್ರವಲ್ಲ, ವಿಶ್ವದಾದ್ಯಂತ ಅನೇಕ ದೇಶಗಳು ಆರಾಧಿಸಲು ಕಾರಣವಾಗಿದೆ. ಶ್ರೀರಾಮನನ್ನು ಹೖದಯದಲ್ಲಿ ಇರಿಸಿಕೊಂಡಾಗ ಮಾತ್ರ ಆತನ ಉತ್ತಮ ಗುಣಗಳನ್ನು ಜೀವನದಲ್ಲಿ ಅನುಸರಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ಸಾಹಿತಿ ಡಾ.ಗಜಾನನ ಶಮ೯ ಪ್ರತಿಪಾದಿಸಿದ್ದಾರೆ. ನಗರದ
ರೆಡ್ ಬ್ರಿಕ್ಸ್ ಇನ್ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಕತ೯ .ಅನಿಲ್ ಹೆಚ್ .ಟಿ. ರಚಿಸಿದ ‘ಅಯೋಧ್ಯೆ ಶ್ರೀರಾಮನ ಮಂದಿರ, ಇದು ಪ್ರೀತಿಯ ಮಂದಿರ, ರಾಷ್ಟ್ರಮಂದಿರ’ ಪುಸ್ತಕವನ್ನು ಬಿಡುಗಡೆ ಮಾಡಿ ಗಜಾನನ ಶರ್ಮ ಮಾತನಾಡಿದರು.
ತಾವು ಬರೆದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಎಂಬ ಹಾಡು ಹುಟ್ಟಿದ ಬಗೆಯನ್ನು ಸವಿವರವಾಗಿ ವಿವರಿಸಿದ ಡಾ.ಗಜಾವನ ಶಮ೯, ಸರಳ ಪದಪುಂಜಗಳಲ್ಲಿ ರೂಪಿತಗೊಂಡ ಈ ಹಾಡು ಈ ರೀತಿಯಲ್ಲಿ ವಿಶ್ವವಿಖ್ಯಾತವಾಗುತ್ತದೆ ಎಂದು ನಿರೀಕ್ಷಿಯೇ ಇರಲಿಲ್ಲ. ಎಲ್ಲವೂ ರಾಮನ ಮಹಿಮೆಯಾಗಿದೆ ಎಂದರು. ಈ ಹಾಡು ಬರೆದು 10 ವಷ೯ಗಳೇ ಕಳೆದರೂ ಇಂದಿಗೂ ಅನೇಕರ ಮನಸ್ಸಿನಂತೆ ಜೀವನಕ್ಕೂ ಈ ಹಾಡು ಬಹಳ ಆಪ್ತವಾಗಿರುವುದು ಹಾಡು ಬರೆದ ತನಗೇ ಅಚ್ಚರಿಯನ್ನು ಉಂಟು ಮಾಡಿದೆ ಎಂದು ಗಜಾನನ ಶಮ೯ ಹೇಳಿದರು. ಅಯೋಧ್ಯೆಗೇ ತೆರಳಿ ಪತ್ರಕತ೯ ಅನಿಲ್ ಬರೆದ ಅಯೋಧ್ಯೆ ಕೖತಿಯು ಜನರ ಪ್ರೀತಿಯ ಮಂದಿರದಂತೆ ಭಾರತೀಯರ ಹೆಮ್ಮೆಯ ರಾಷ್ಟ್ರೀಯ ಮಂದಿರವಾಗಿ ಕಂಗೊಳಿಸಿರುವ ಚಿತ್ರಣವನ್ನು ಮನಸ್ಸಿಗೆ ತಟ್ಟುವಂತೆ ಪದಗಳಲ್ಲಿ ತಿಳಿಸಿದೆ ಎಂದೂ ಗಜಾನನ ಶಮ೯ ಹೆಮ್ಮೆ ಪಟ್ಟರು.
ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ಅನಿಲ್ ಹೆಚ್.ಟಿ. ಅಯೋಧ್ಯೆ ಪುಸ್ತಕವನ್ನು ಅತ್ಯುತ್ತಮವಾಗಿ ರಚಿಸಿದ್ದಾರೆ’ ಎಂದು ಶ್ಲಾಘಿಸಿದರು. ಅನಿಲ್ ಬರಹದಲ್ಲಿ ವಿನೂತನ ಶೈಲಿಯಿದೆ. ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸುವ ಸ್ವಭಾವವೇ ಅನಿಲ್ ಬರಹಕ್ಕೆ ಸ್ಪೂತಿ೯ಯಾಗಿರುವುದು ವಿಶೇಷ ಎಂದೂ ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ಅಯೋಧ್ಯೆ ಕೖತಿಕಾರ ಅನಿಲ್ ಹೆಚ್.ಟಿ. ಮಾತನಾಡಿ, ಅಯೋಧ್ಯೆಗೆ ಅನೇಕ ಬಾರಿ ತೆರಳಿದ್ದರೂ ಈಗ ದೇವನಗರಿಯಲ್ಲಿ ಆಗಿರುವ ಬದಲಾವಣೆ ಊಹೆಗೂ ನಿಲುಕದಂತಿದೆ. ಅಯೋಧ್ಯೆ ಕೖತಿ ಓದಿದ ಬಳಿಕ ದೇವನಗರಿಗೆ ತೆರಳಬೇಕು ಎಂಬ ಭಾವನೆ ಮೂಡಿದರೆ ತನ್ನ ಪ್ರಯತ್ನ ಸಾಥ೯ಕವಾದಂತೆ. ಹಾಗೇ ಅಯೋಧ್ಯೆ ಕೖತಿ ಓದಿ ಇಲ್ಲಿ ಸಂಪೂಣ೯ ಅಯೋಧ್ಯೆಯ ಚಿತ್ರಣವಿದೆ. ಅಯೋಧ್ಯೆಗೆ ತೆರಳುವುದು ಯಾತಕ್ಕೆ ಎನ್ನಿಸಿದರೂ ತನ್ನ ಶ್ರಮ ಸಾಥ೯ಕವಾದಂತೆ ಎಂದು ಹೇಳಿದರು. ಪ್ರತೀಯೋವ೯ರು ದೈವನಗರದಂತೆ ಕಂಗೊಳಿಸುತ್ತಿರುವ ಅಯೋಧ್ಯೆಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು ಎಂದೂ ಅನಿಲ್ ಮನವಿ ಮಾಡಿದರು.
ಇದೇ ಸಂದಭ೯ ಸರಿಗಮಪ ರಿಯಾಲಿಟಿ ಶೋನ ಸ್ಪಧಿ೯, ಕೊಡಗಿನ ಯುವ ಗಾಯಕ ಅನ್ವಿತ್ ಕುಮಾರ್ ಇನ್ನಷ್ಟು ಬೇಕೆನ್ನ ಹೖದಯಕ್ಕೆ ರಾಮ ಹಾಡನ್ನು ಸುಶ್ಯಾವ್ಯವಾಗಿ ಹಾಡಿದರು. ಲೇಖಕಿ ಕೆ.ಜಯಲಕ್ಷ್ಮಿ ನಿರೂಪಿಸಿದ ಕಾಯ೯ಕ್ರಮದಲ್ಲಿ ಅತಿಥಿಗಳ ಪರಿಚಯನ್ನು ಪತ್ರಕತ೯ ಕುಡೆಕಲ್ ಸಂತೋಷ್, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಮಾಡಿದರು. ರೀನಾ ಅನಿಲ್ , ಎಸ್.ಎಸ್. ಸಂಪತ್ ಕುಮಾರ್ ಕಾಯ೯ಕ್ರಮ ನಿವ೯ಹಿಸಿದರು. ಚಿತ್ರಾನಂಜಪ್ಪ, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ ರಾಮಸ್ತುತಿ ಹಾಡಿದರು.
ಸಾಹಿತಿ ಡಾ..ಗಜಾನನ ಶಮಾ೯ , ನಾಗರತ್ನ ಶಮಾ೯ ದಂಪತಿಯನ್ನು ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ನಗರಸಭೆಯ ಅಧ್ಯಕ್ಷೆ ಅನಿತಾಪೂವಯ್ಯ, ಡಾ.ಎಂ.ಜಿ.ಪಾಟ್ಕರ್, ಹೆಚ್.ಎಸ್.ತಿಮ್ಮಪ್ಪಯ್ಯ ಸನ್ಮಾನಿಸಿ ಗೌರವಿಸಿದರು. ಲೇಖಕ ಅನಿಲ್ ಹೆಚ್.ಟಿ. ಅವರನ್ನು ಸನ್ಮಾನಿಸಲಾಯಿತು.