The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಅಂಕಣ:ಹವಾ ವೈವಿಧ್ಯ:ಕರಿಮುಗಿಲ ಬಾನಿಂದ ಧರೆಗಿಳಿದ ಮೇಘಗಳು- ಭೋರ್ಗರೆದ ವರುಣ: ಹಲವೆಡೆ ಶತಕದಾಟ

by ದಿ ಸುಳ್ಯ ಮಿರರ್ ಸುದ್ದಿಜಾಲ May 24, 2023
by ದಿ ಸುಳ್ಯ ಮಿರರ್ ಸುದ್ದಿಜಾಲ May 24, 2023
Share this article

*ಪಿ.ಜಿ.ಎಸ್‌.ಎನ್.ಪ್ರಸಾದ್.
ಅಪರಾಹ್ನ 2 ರ ವೇಳೆಗಾಗಲೇ ಕವಿದ ಕಾರ್ಮೋಡ. ನಡುಕ ಹುಟ್ಟಿಸಿದ ಗುಡುಗು ಸಿಡಿಲು. ನಿರೀಕ್ಷೆಗೂ ಮೀರಿದ ಭರ್ಜರಿ ಮಳೆ.. ಸುಳ್ಯ, ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಒಂದು ಗಂಟೆಯ ಅವಧಿಯಲ್ಲಿ ವರುಣನಾಡಿದ ಆಟ..ಶತಕಕ್ಕೂ ಮೀರಿದ್ದು. ಅನೇಕ ಕಡೆ ಮಳೆಯೊಂದಿಗೆ ಆಲಿಕಲ್ಲು ಸಹಿತ ಉತ್ತಮ ಮಳೆ. ನಿನ್ನೆ ಸಾಧಾರಣ ಮಳೆ ಬರಬಹುದು ಎಂಬ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮುನ್ಸೂಚನೆ ಇತ್ತಷ್ಟೆ.. ಆದರೆ ನಡೆದದ್ದೇ ಬೇರೆ…. ಸಂಜೆ 6.30 ರ ಬಳಿಕ ದ್ವಿತೀಯ ಸುತ್ತಿನ ಹದವರಿತ ಆಟವೂ ನಡೆಯಿತು.! ಗುಡುಗು, ಸಿಡಿಲಿನ ಅಬ್ಬರದ ನಡುವೆ ಮಳೆಗಾಲವನ್ನು ನೆನಪಿಸುತ್ತಿದ್ದ ಕಾರ್ಗತ್ತಲ ವಾತಾವರಣದಲ್ಲಿ ಮೇಘಗಳು ಧೋ ಎಂದು ಧರೆಗಿಳಿದವು.. ಇದರಿಂದ ಹಲವು ಕಡೆಗಳಲ್ಲಿ ನೂರಕ್ಕೂ ಅಧಿಕ ಮಿ.ಮಿ.ಮಳೆಯಾಗಿದೆ ಎಂಬುದು ವಿಶೇಷ. ಬಳ್ಪ- ಪಟೋಳಿ 131, ಕೇನ್ಯ 122, ಎಣ್ಮೂರು 120, ಎಣ್ಮೂರು-ಅಲೆಂಗಾರ 109, ಬಳ್ಪ 106 .. ಶತಕದಾಟ !

ದೇವರಮಜಲು-ಎಡಮಂಗಲ 99, ಕಡಬ-ಕೋಡಿಂಬಳ 98, ಮುರುಳ್ಯ 86, ಬೆಳ್ಳಾರೆ- ಕಾವಿನಮೂಲೆ 85, ಕಮಿಲ 78, ಬಾಳಿಲ (ಉತ್ತರ) 77 ಅಯ್ಯನಕಟ್ಟೆ (ಬಾಳಿಲ ಪಶ್ಚಿಮ) 74, ಬಾಳಿಲ (ದಕ್ಷಿಣ) 73, ಕರಿಕ್ಕಳ 75, ಕಡಬ 73, ಪಂಬೆತ್ತಾಡಿ-ನೆಕ್ರಕಜೆ 60, ಕೊಳ್ತಿಗೆ-ಎಕ್ಕಡ್ಕ 55, ಸುಬ್ರಹ್ಮಣ್ಯ 54, ಪಾಣಾಜೆ- ಗಿಳಿಯಾಲು 42, ನಡುಗಲ್ಲು 42, CPCRI ಕಾಸರಗೋಡು 40, ಚೊಕ್ಕಾಡಿ, ಕಲ್ಲಾಜೆ ತಲಾ 34, ಕೀಲಾರ್ಕಜೆ-ದೊಡ್ಡತೋಟ 32, ಮುಂಡಾಜೆ 30, ಹರಿಹರ-ಮಲ್ಲಾರ 28, ಕೊಲ್ಲಮೊಗ್ರ 25, ಬೆಳ್ತಂಗಡಿ 24, ಸುಳ್ಯ ನಗರ 23, ನೆಲ್ಯಾಡಿ 15, ಮಡಪ್ಪಾಡಿ, ಮುಂಡೂರು, ಬೆಳ್ತಂಗಡಿ-ಚರ್ಚ್ ರಸ್ತೆ ತಲಾ 10, ಕುಂಬ್ಳೆ-ಎಡನಾಡು 25, ಅಡೆಂಜ-ಉರುವಾಲು 02 ಮಿ.ಮೀ.ನಷ್ಟು ಮಳೆಯಾಗಿದೆ. ಇಷ್ಟಾಗಿಯೂ ಕೈಲಾರು, ಕಂಪದಕೋಡಿ ಮುಂತಾದೆಡೆ ನಿನ್ನೆ ಮಳೆಯೇ ಬಂದಿಲ್ಲ..
ಮಳೆ ಇಂದೂ ಇರಲಿದೆ..ವರುಣನಾಟ ಇಂದೂ ಭರ್ಜರಿಯಾಗಿ ಮುಂದುವರಿಯುವ ಸೂಚನೆ ಇದೆ. ಈ ಬಾರಿ ಮುಂಗಾರು ಪೂರ್ವ ಸುರಿವ ಪ್ರತಿ ಮಳೆಯಲ್ಲೂ ಗಾಳಿ, ಗುಡುಗು, ಮಿಂಚು ಪ್ರಧಾನ ಪಾತ್ರ ವಹಿಸಲಿದೆ.. ಆದುದರಿಂದಲೇ ಭಾನುವಾರ ರಾತ್ರಿ, ನಿನ್ನೆ ಹಗಲಿನ ಸಿಡಿಲಾರ್ಭಟ ಹಲವರ ಮನೆಯ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಫೋಷನ ತೆಗೆದುಕೊಂಡಿದೆ. ಆದುದರುಂದ ಸಿಡಿಲಿನ ಬಗ್ಗೆ ಸಾಕಷ್ಟು ಎಚ್ಚರಿಕೆ ಮತ್ತು ಜಾಗೃತಿ ವಹಿಸಬೇಕಾಗಿದೆ..!

(ಲೇಖಕರು ಪ್ರಗತಿಪರ ಕೃಷಿಕರು, ಹವಾಮಾನ ಅಧ್ಯಯನಾಸಕ್ತರು. ಮಳೆ ದಾಖಲೆಗಾರರು)

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ವೀರ ಅಬ್ಬಕ್ಕರಾಣಿಯ ನೆಲದ ಜನಪ್ರಿಯ ಶಾಸಕ ಖಾದರ್ ಇನ್ನು ಕನ್ನಾಡಿನ ಸ್ಫೀಕರ್..ರಾಜ್ಯ ರಾಜಕೀಯ ಚರಿತೆಯಲ್ಲೊಂದು ದ-ಕ ಇತಿಹಾಸ!!!
next post
ನೂತನ ಸ್ಪೀಕರ್‌ ಯು.ಟಿ ಖಾದರ್‌ ಅಧಿಕಾರ ಸ್ವೀಕಾರ

You may also like

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಮಾರ್ಗಸೂಚಿ...

June 5, 2023

ಮುಂದಿನ 48 ಗಂಟೆಗಳಲ್ಲಿ ಕೇರಳಕ್ಕೆ ನೈರುತ್ಯ ಮುಂಗಾರು ಪ್ರವೇಶ ಸಾಧ್ಯತೆ:...

June 5, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ
  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ