The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ವೀರ ಅಬ್ಬಕ್ಕರಾಣಿಯ ನೆಲದ ಜನಪ್ರಿಯ ಶಾಸಕ ಖಾದರ್ ಇನ್ನು ಕನ್ನಾಡಿನ ಸ್ಫೀಕರ್..ರಾಜ್ಯ ರಾಜಕೀಯ ಚರಿತೆಯಲ್ಲೊಂದು ದ-ಕ ಇತಿಹಾಸ!!!

by ದಿ ಸುಳ್ಯ ಮಿರರ್ ಸುದ್ದಿಜಾಲ May 24, 2023
by ದಿ ಸುಳ್ಯ ಮಿರರ್ ಸುದ್ದಿಜಾಲ May 24, 2023
Share this article

*ಎಂ.ನಾ.ಚಂಬಲ್ತಿಮಾರ್.
ಫರಂಗಿಗಳ ಫಿರಂಗಿಗೆ ಎದೆಯೊಡ್ಡಿ ಹೋರಾಡಿದ ಉಳ್ಳಾಲದ ವೀರರಾಣಿ ಅಬ್ಬಕ್ಕನ ನೆಲದ ಶಾಸಕ,ಮಾಜಿ ಮಂತ್ರಿ ಯು. ಟಿ. ಖಾದರ್ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆಗಿದ್ದಾರೆನ್ನುವುದು ಮಹತ್ವದ ಮತ್ತು ಕೌತುಕದ ಬೆಳವಣಿಗೆ. ಅವರಿಗೆ ಹೃದಯಸ್ಪರ್ಶಿ ಅಭಿನಂಧನೆಗಳು.
ಈ ಹಿಂದೆ ಆರೋಗ್ಯ ಸಚಿವರಾಗಿ ಜನಪ್ರಿಯರಾಗಿದ್ದ ಅವರಿಗೆ ಈ ಬಾರಿ ಮಹತ್ವದ ಖಾತೆಯನ್ನೇ ನಿರೀಕ್ಷಿಸಲಾಗಿತ್ತು. ಆದರೆ ಕಾಕತಾಳೀಯ ಸದನದ ಅಧ್ಯಕ್ಷತೆಯೆಂಬ “ಸ್ಪೀಕರ್” ಗೌರವ ಒಲಿದಿದೆ.
ಇದು ತೂಕದ, ಕಾನೂನು ಅರಿವುಗಳಿರಬೇಕಾದ ಶಾಸನಾಂಗ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ನಿರ್ವಹಣೆಯ ಜಾಗ. ಈ ಜಾಗದಲ್ಲವರು ಹೇಗೆ ನಿರ್ವಹಿಸುತ್ತಾರೆನ್ನುವುದು ಮುಖ್ಯ. ಇಲ್ಲೂ ಯಶಸ್ವಿ ಆದರೆ ಭವಿಷ್ಯದ ನಡಿಗೆ ಇನ್ನೂ ಎತ್ತರಕ್ಕೆ ಮು. ಮಂತ್ರಿ ಪದವಿಯ ಕಡೆಗೆ ಎಂಬುದು ರಾಜಕೀಯ ಭವಿಷ್ಯದ ಮಾತು…
ಅಭಿಮಾನಿಗಳ ಅಭಿಮತ.
ಅದು ಒತ್ತಟ್ಟಿಗಿದಲಿ.. ಪ್ರಸಕ್ತ ಖಾದರ್ ಅವರಿಗೆ ಕ್ಯಾಬಿನೆಟ್ ಪದವಿಯ ಉನ್ನತ ಸಚಿವ ಸ್ಥಾನ ನೀಡದೇ, ಸ್ಪೀಕರ್ ಹುದ್ದೆ ನೀಡುವ ಮೂಲಕ ಅವರನ್ನು ಒಂದೆಡೆ ಗೌರವದಲ್ಲಿ ಕೂರಿಸಿದಾಗ.. ಕೈ ತಪ್ಪಿರುವುದು ಕನ್ನಾಡಿನ ಕರಾವಳಿಗೆ ಉನ್ನತ ಸಚಿವ ಸ್ಥಾನ ಮತ್ತು ಸ್ಥಾನೀಯ ಉಸ್ತುವಾರಿ ಸಚಿವತ್ವದ ಪ್ರಾತಿನಿಧ್ಯ!
ಅದಿರಲಿ ಖಾದರ್ ಅವರು -ಸಹೃದಯಿ, ಸರಳ ವ್ಯಕ್ತಿ. ತನಗಿಂಥದೇ ಬೇಕೆಂದು ಪಟ್ಟು ಹಿಡಿಯದವರು. ಪಕ್ಷದ ನಿಷ್ಠಾವಂತ ನಾಯಕ. ಕಾರ್ಯಕರ್ತರ ಆಪ್ತ. ಜನರೆಲ್ಲರ ಒಲುಮೆಯ ಪ್ರೀತಿಪಾತ್ರ. ಈ ಕಾರಣದೀಂದಲೇ ಅವರು ಕರಾವಳಿಯ ಅಳಿಸಲಾಗದ ಖದರುಳ್ಳ ಖಾದರು!

ಇತ್ತೀಚಿನ ವರ್ಷಗಳ ಹಿಂದೊಮ್ಮೆ ಕೋಟೆಕಾರು ಬೀರಿ ಕೊಂಡಾಣದಲ್ಲಿ ಕಟೀಲು ಮೇಳದ ಆಟ. ಅದು ಚುನಾವಣಾ ಸಮಯ. ಆಗವರು ಸಚಿವರಾಗಿದ್ದರು. ನಾನೂ ಅಲ್ಲಿದ್ದೆ. ಪರಿಚಯಿಸಲಿಕ್ಕೋ, ಗುರುತು ಮಾಡಲೋ ಹೋಗಲಿಲ್ಲ. ಏಕೆಂದರೆ ಪತ್ರಕರ್ತ ನಾದವನು ಎಂದಿಗೂ ಕೊನೆಯ ಬೆಂಚಿನ ಪ್ರೇಕ್ಷಕನಾಗಬೇಕೆಂಬ ಜಾಗೃತ ಪ್ರಜ್ಞೆ!!
ಆದರೆ “ಖದರೇ”ನೂ ಇಲ್ಲದೇ ಒಬ್ಬ ಸಾಮಾನ್ಯ ಮನುಷ್ಯನಾಗಿ ಆಟಕ್ಕೆ ಬಂದ ಖಾದರ್ ಅವರು ಸಭೆಯಲ್ಲಿ ಓಡಾಡಲಿಲ್ಲ.ನೆರೆದ ನೂರಾರು ಮಂದಿಗೆ ಕೈ ಬೀಸಲಿಲ್ಲ! ತಾನು ಬಂದಿದ್ದೇನೆಂಬ ರುಜುವಾತಿನ ಮೊಹರು ಒತ್ತಲಿಲ್ಲ!!
ಬದಲಿಗೆ ಏನು ಮಾಡಿದ್ದರೆಂದರೆ….
ಚೌಕಿಗೆ ಬಂದು ಕಲಾವಿದರ ಪೆಟ್ಟಿಗೆಯಲ್ಲಿ ಕುಳಿತರು. ಕಲಾವಿರದರ ಕುರಿತೇ ಕ್ಷೇಮ ವಿಚಾರಿಸಿದರು. ಸಂಘಟಕರ ಜತೆ ಮಾತಾಡಿದರು. ಅಲ್ಲೇ ಸಾರ್ವಜನಿಕರೊಡನೆ ನಿಂತು ಹಾಳೆ ಪ್ಲೇಟಲ್ಲಿ ಇಕ್ಕಿದ್ದನ್ನು ಉಂಡರು!
ಕಲಾವಿದರೊಡನೆ ಮಾತಾಡಿ, ಸ್ವಲ್ಪ ಆಟ ನೋಡಿ ಯುವಕರೊಡನೆ ಬೆರೆತು ಮರಳಿದರು.
“ಆರ್ ಅಂಚನೇ ಮಾರ್ರೇ.. ಊರುಡ್ ಇತ್ತ್ಂಡ ಜವನೆರೊಟ್ಟುಗ್ ಮಸ್ತ್ ಕುಸಾಲ್ ಪಾತೆರ್ವೆರ್. ನೇಮ, ಆಟ ಪನ್ಪಿ ಬೇಧ ಇಜ್ಜಾಂದೆ ಒಟ್ಟು ಸೇರುವೆರ್” ಎಂದರು ಕೆಲವರು..
ಇಂಥ ಖಾದರ್ ಈಗ ಕರ್ನಾಟಕದ ಸ್ಪೀಕರ್.
ಇಷ್ಟಕ್ಕೂ ಅವರು ನಮ್ಮ ಗಡಿನಾಡಿನವರು. ಅವರ ತಂದೆ ಯು. ಟಿ. ಫರೀದ್ ನಮ್ಮ ಉಪ್ಪಳ ಮೂಲದವರು. ಹೀಗಾಗಿ ಕಾಸರಗೋಡಿನ ಗಡಿನಾಡಿಗರಲ್ಲಿ ಮಮತೆ. ಒಟ್ಟಂದದಲ್ಲಿ ಖಾದರ್ ಅವರಪ್ಪ ಫರೀದರ ಫಥ ತುಳಿದ ಮನುಷ್ಯ ಪ್ರೀತಿಯ ರಾಜಕಾರಣಿ. ಕರ್ನಾಟಕದ ಚರಿತ್ರೆಯಲ್ಲೇ ಮುಸಲ್ಮಾನ ನೊಬ್ಬ, ಅದರಲ್ಲೂ ಕರಾವಳಿಯ ಮಂಗಳೂರಿನವರು ರಾಜ್ಯದ “ಸ್ಪೀಕರ್” ಆಗುವುದು ಇದೇ ಮೊದಲು!
ಶಾಸನ ಸಭೆಯ ಸ್ಪೀಕರ್ ಎಂದರೆ ಅದು ಮುಖ್ಯಮಂತ್ರಿಗೂ ಉನ್ನತ ಸ್ಥಾನಮಾನ. ಅದಕ್ಕೆ ಮಂತ್ರಿ ಪದವಿಯಿಲ್ಲ ನಿಜ. ಆದರೆ ಮಂತ್ರಿಗಳೆಲ್ಲರೂ, ಶಾಸಕರೆಲ್ಲರೂ ಅಧ್ಯಕ್ಷರಿಗೆ ನಮಿಸಿ ಮಾತಾಡಬೇಕು. ನಾಳೆ ಮುಖ್ಯಮಂತ್ರಿ ಆಗುವವರಿಗೆ ಇದೇ ದೊಡ್ಡ ಅನುಭವದ ಅಂಗೀಕಾರ……!

(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು.ಅಂಕಣಕಾರರು. ಕಣಿಪುರ ಯಕ್ಷಗಾನ ಪತ್ರಿಕೆಯ ಸಂಪಾದಕರು).

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಭರ್ಜರಿ​ ಗೆಲುವಿನೊಂದಿಗೆ ಐಪಿಎಲ್ ಫೈನಲ್‌ಗೆ ಚೆನ್ನೈ ಸೂಪರ್​ ಕಿಂಗ್ಸ್​
next post
ಅಂಕಣ:ಹವಾ ವೈವಿಧ್ಯ:ಕರಿಮುಗಿಲ ಬಾನಿಂದ ಧರೆಗಿಳಿದ ಮೇಘಗಳು- ಭೋರ್ಗರೆದ ವರುಣ: ಹಲವೆಡೆ ಶತಕದಾಟ

You may also like

ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ...

June 8, 2023

ಚೂಂತಾರು: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ.

June 7, 2023

ಗೃಹಲಕ್ಷ್ಮಿ ಯೋಜನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಸರಕಾರ

June 7, 2023

ಅರಬ್ಬಿ ಸಮುದ್ರದಲ್ಲಿ ‘ಬಿಪರ್ಜೋಯ್’ ಚಂಡಮಾರುತ ಸೃಷ್ಟಿ: ತೀವ್ರ ಸ್ವರೂಪ ಪಡೆಯುತ್ತಿರುವ...

June 7, 2023

ಸಂಪಾಜೆಯ ನದಿಗಳಲ್ಲಿ ತುಂಬಿದ ಹೂಳು ತೆಗೆಯುವ ಕಾರ್ಯಾಚರಣೆಗೆ ಚಾಲನೆ

June 7, 2023

ಸುಳ್ಯ ನಗರ ಪಂಚಾಯತ್ ಪರಿಸರ ಈಗ ತ್ಯಾಜ್ಯ ಮುಕ್ತ..! ನ.ಪಂ.ಸುತ್ತಲೂ...

June 6, 2023

ಡೆಂಗ್ಯೂ, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

June 6, 2023

ನೈತಿಕ ಪೊಲೀಸ್​ಗಿರಿ ತಡೆಗೆ ‘ಆ್ಯಂಟಿ ಕಮ್ಯುನಲ್ ವಿಂಗ್’ ಸ್ಥಾಪನೆ: ಗೃಹ...

June 6, 2023

ಸಂಪಾಜೆ ಗ್ರಾಮದ ಮೂಲಭೂತ ಅಭಿವೃದ್ಧಿಗಾಗಿ ಹೋರಾಟ: ಸಂಪಾಜೆ ಮೂಲಭೂತ ಸೌಕರ್ಯಗಳ...

June 6, 2023

ಬಾಡಿಗೆ ಮನೆಯಲ್ಲಿ ವಾಸಿಸುವವರಿಗೂ ಉಚಿತ ವಿದ್ಯುತ್: ಸಿಎಂ ಸಿದ್ದರಾಮಯ್ಯ

June 6, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಬಿ.ಎಸ್.ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ಮುಖಂಡರ ಭೇಟಿಯಾದ ಶಾಸಕಿ ಭಾಗೀರಥಿ ಮುರುಳ್ಯ
  • ನಗರ ಸ್ವಚ್ಛತಾ ಅಭಿಯಾನ: ಆಲೆಟ್ಟಿ ರಸ್ತೆಯಲ್ಲಿ 37ನೇ ವಾರದ ಸ್ವಚ್ಛತಾ ಕಾರ್ಯಕ್ರಮ
  • ಹಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
  • ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಗೃಹ ಸಚಿವ ಡಾ.ಜಿ. ಪರಮೆಶ್ವರ್ ಅವರಿಗೆ ಸನ್ಮಾನ
  • ಹನಿ‌ ಸುರಿಸಿ ಮಾಯವಾದ ವರುಣ: ಮುಂದುವರಿದ ಮಳೆಯ ಕಣ್ಣಾ ಮುಚ್ಚಾಲೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ