ಸುಳ್ಯ: ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಬಂಡಾಯವನ್ನು ಎದುರಿಸಿ ಒಂದು ತಂಡವಾಗಿ ಕೆಲಸ ಮಾಡಿ ಬಿಜೆಪಿ ಅಧಿಕೃತ ಬೆಂಬಲಿತರನ್ನು ಗೆಲ್ಲಿಸಿ ಅರಂತೋಡು ಗ್ರಾಮ ಪಂಚಾಯತ್ನಲ್ಲಿ ಅಧಿಕಾರಕ್ಕೆ ತಂದಿದ್ದೇನೆ ಎಂಬ ಹೆಮ್ಮೆ ಇದೆ. ಆದರೆ ಇಂದು ನಡೆದ ಗ್ರಾಮ ಪಂಚಾಯತ್ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬಗ್ಗೆ ಬೇಷರ ಇದೆ ಎಂದು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮಂಡಲ ಕೋಶಾಧಿಕಾರಿ ಶಿವಾನಂದ ಕುಕ್ಕುಂಬಳ ಹೇಳಿದ್ದಾರೆ. ಅರಂತೋಡು ಗ್ರಾ.ಪಂ. ಅಧ್ಯಕ್ಷ ಚುನಾವಣೆಯ ಫಲಿತಾಂಶದ ಬಳಿಕ
ಅವರು ‘ಸುಳ್ಯ ಮಿರರ್’ ಜೊತೆ ಮಾತನಾಡಿದರು. ನಾನು ಸ್ಥಾನಮಾನಕ್ಕಾಗಿ ಎಂದೂ ಲಾಬಿ ಮಾಡಲಿಲ್ಲ, ಹಿಂದೆ ಗ್ರಾ.ಪಂ ಉಪಾಧ್ಯಕ್ಷನಾಗಿ ಅತ್ಯುತ್ತಮ ಕೆಲಸ ಮಾಡಿದ್ದೆ. ಅರಂತೋಡು ಗ್ರಾ.ಪಂ.ನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದೆವು. ಹಲವಾರು ಪ್ರಶಸ್ತಿ ಬಂದಿತ್ತು. ಅಮೃತ ಗ್ರಾಮ, ಗಾಂಧಿಗ್ರಾಮ ಪುರಸ್ಕಾರ, ಸುಸಜ್ಜಿತ ಘನತ್ಯಾಜ್ಯ ಘಟಕ ಮಾಡಿರುವುದಕ್ಕೆ ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಪ್ರಶಸ್ತಿ ಬಂದಿತ್ತು. ಜೊತೆಗೆ ಐಎಸ್ಒ ಸರ್ಟಿಫಿಕೇಟ್ ಪಡೆದ ರಾಜ್ಯದ 10 ಗ್ರಾಮಗಳಲ್ಲಿ ಅರಂತೋಡು ಪಂಚಾಯತ್ ಒಂದು. ನನ್ನ ಕೆಲಸ ಮತ್ತು ಯೋಗ್ಯತೆ ನೋಡಿ ನಮ್ಮ ಸದಸ್ಯರು ಜವಾಬ್ದಾರಿ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು.
ಆದರೆ ಯಾಕೆ ಕೊಡಲಿಲ್ಲ ಎಂದು ಗೊತ್ತಿಲ್ಲ. ಅದು ಸ್ವಲ್ಪ ಬೇಸರ ತಂದಿದೆ. ಆದುದರಿಂದ ನನ್ನ ಸೇವೆಗೆ ಇನ್ನು ಅಸ್ಟೊಂದು ಪ್ರಾಮುಖ್ಯತೆ ಇಲ್ಲಾ ಎಂಬುದು ಗೊತ್ತಾಗಿದೆ. ಆದುದರಿಂದ ಸಕ್ರೀಯ ರಾಜಕಾರಣದಿಂದ ಮತ್ತು ಸಾರ್ವಜನಿಜ ಜೀವನದಿಂದ ನಿವೃತ್ತನಾಗುತ್ತೇನೆ. 10 ದಿನದಲ್ಲಿ ಸುದ್ದಿಗೋಷ್ಠಿ ಕರೆದು ನಿರ್ಧಾರ ಪ್ರಕಟಿಸುತ್ತೇನೆ ಎಂದು ಶಿವಾನಂದ ಕುಕ್ಕುಂಬಳ ಹೇಳಿದ್ದಾರೆ. ನನಗೆ ಅಧ್ಯಕ್ಷತೆ ನೀಡಿಲ್ಲ ಎಂದು ಯಾರ ಮೇಲೂ ಯಾವ ದ್ವೇಷವೂ ಇಲ್ಲಾ, ಆದರೆ ನನ್ನ ಪರ್ಪೋರ್ಮೆನ್ಸ್ ಬಗ್ಗೆ, ರಾಜಕೀಯ, ಸಾರ್ವಜನಿಕ ಸೇವೆಯ ಬಗ್ಗೆ ಖಂಡಿತಾ ಪುನರವಲೋಕನ ಮಾಡುತ್ತೇನೆ ಎಂದು ಅವರು ಹೇಳಿದರು.