ಸುಳ್ಯ: ನೆಹರು ಮೆಮೋರಿಯಲ್ ಪ ಪೂ ಕಾಲೇಜಿನ ಕಲಾ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ‘ಕಂಡಡೊಂಜಿ ದಿನ’ ಕ್ರೀಡಾ ಕೂಟವು ಮನಮೋಹನ ಪುತ್ತಿಲ ಅವರ ಕಾಂತಮಂಗಲದ ‘ಪುತ್ತಿಲ ಫಾರ್ಮ್’ ಗದ್ದೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಮನ ಮೋಹನ ಪುತ್ತಿಲ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ಮನಮೋಹನ ಪುತ್ತಿಲ ಅವರನ್ನು
ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ರೇಷ್ಮಾ ಎಂ ಎಂ, ಹರೀಶ ಸಿ,ವಾಣಿಜ್ಯ ಸಂಘದ ಸಂಚಾಲಕಿ ಸಾವಿತ್ರಿ ಕೆ,ಕಾರ್ಯಕ್ರಮ ಸಂಯೋಜಕರು, ಉಪನ್ಯಾಸಕರಾದ ವಿನಯ ನಿಡ್ಯಮಲೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥಿಸಿ, ಉಪನ್ಯಾಸಕ ವಿನಯ್ ನಿಡ್ಯಮಲೆ ಸ್ವಾಗತಿಸಿದರು.ವಿ ಕ್ಷೇಮಾಧಿಕಾರಿ ಹರೀಶ ಸಿ ವಂದಿಸಿದರು. ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ ಕಾರ್ಯಕ್ರಮ ನಿರೂಪಿಸಿದರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಮಿಥನ್,ಸುಳ್ಯ ಎನ್ನೆoಪಿಯುಸಿಯ ಕ್ರೀಡಾ ಕೋಚ್ ನಾಗರಾಜ್ ನಾಯ್ಕ್ ಭಟ್ಕಳ ತೀರ್ಪುಗಾರರಾಗಿ ಸಹಕರಿಸಿದರು.ಪುತ್ತಿಲ ಕುಟುಂಬದವರಾದ ಗಂಗಾಧರ, ನಾರಾಯಣ, ವಿಶ್ವನಾಥ್, ತುಳಸಿ,ಸುಜನ್, ಧ್ಯಾನ್ ದೀಪ್ ಮತ್ತು ಮನೆಯವರು ಹಾಗೂ ರಾಮಚಂದ್ರ ಮತ್ತು ಪದ್ಮನಾಭ ಭಟ್ರಮಕ್ಕಿ ಸಹಕಾರ ನೀಡಿದರು.ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಯೋಗಿ ತೀರ್ಥೇಶ್ ಯಾದವ್ ವೀಕ್ಷಕ ವಿವರಣೆ ನೀಡಿದರು.
ವಿದ್ಯಾರ್ಥಿನಿಯರು ಹಾಡು, ನೃತ್ಯ ಪ್ರಸ್ತುತ ಪಡಿಸಿದರು.ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಓಟ, ನಿಧಿ ಶೋಧ,ವಾಲಿಬಾಲ್,ಹಗ್ಗಜಗ್ಗಾಟ ಮೊದಲಾದ ಕ್ರೀಡಾ ಕೂಟದಲ್ಲಿ ಭಾಗವಹಿಸಿದರು. ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.ಕ್ರೀಡಾ ಕೂಟದ ಬಳಿಕ ಸಮಾರೋಪ ಸಮಾರಂಭ ನಡೆಯಿತು. ಉಪನ್ಯಾಸಕಿ ಸಾವಿತ್ರಿ ಕೆ ವಂದಿಸಿದರು.