ಕನಕಮಜಲು: ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ಜಾಲ್ಸೂರು, ಯುವಕ ಮಂಡಲ, ಕನಕಮಜಲು ಇವರ ಸಂಯುಕ್ತ ಆಶ್ರಯದಲ್ಲಿ ಸಂತ್ಯಾಡ್ಕ (ಕನ್ನಡ್ಕ) ಗದ್ದೆ, ಶ್ರೀರಾಮ್ ಪೇಟೆ ಕನಕಮಜಲಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮ
ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಮಾತನಾಡಿ ತುಳುನಾಡಿನ ಆಚರಣೆಗಳನ್ನು ಪಾಲಿಸಿಕೊಂಡು ಮುಂದಿನ ಯುವ ಸಮೂಹಕ್ಕೆ ಉಳಿಸಿಕೊಂಡು ಮುಂದುವರಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ದಯಾನಂದ ಕೇರ್ಪಳ, ಚಂದ್ರಶೇಖರ ನೇಡಿಲು, ದಾಮೋದರ ಕಣಜಲು, ಲಕ್ಷ್ಮೀನಾರಾಯಣ ಕಜೆಗದ್ದೆ, ಎಲ್ಯಣ್ಣ ಗೌಡ ಶಾಂತಿಯಡ್ಕ, ಶ್ರೀಧರ್ ಕುತ್ಯಾಳ, ಹೇಮಂತ ಮಠ, ಚಂದ್ರಶೇಖರ ಕುದ್ಕುಳಿ, ನೇತ್ರ ಕುಮಾರ್, ಬಾಲಚಂದ್ರ, ಲೋಹಿತ್ ಕುಮಾರ್ ಕುದ್ಕುಳಿ, ಕುಸುಮಾವತಿ ಅಡ್ಕಾರು, ಪ್ರೇಮ ಅಡ್ಕಾರು, ಯಮುನಾ ಶಾಂತಿಯಡ್ಕ, ರೇಖಾ ಅಡ್ಕಾರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.