The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಮೊದಲ ಮಳೆಗೆ ಕುಸಿದ ಕ್ರೀಡಾಂಗಣ ಕೆಳ ಭಾಗದಲ್ಲಿ ಹಾಕಿದ‌ ಮಣ್ಣು: ಆತಂಕದಲ್ಲಿ ಗ್ರೌಂಡ್‌ನ ಕೆಳಭಾಗದ ಜನತೆ..!ಒಂದು ವರ್ಷ ಕಳೆದರೂ ಭರವಸೆಯಲ್ಲಿಯೇ ಉಳಿದ ತಡೆಗೋಡೆ..!

by ದಿ ಸುಳ್ಯ ಮಿರರ್ ಸುದ್ದಿಜಾಲ May 22, 2023
by ದಿ ಸುಳ್ಯ ಮಿರರ್ ಸುದ್ದಿಜಾಲ May 22, 2023
Share this article

ಸುಳ್ಯ:ಸುಳ್ಯ ನಗರದ ಶಾಂತಿನಗರದ ತಾಲೂಕು ಕ್ರೀಡಾಂಗಣದ ಕಾಮಗಾರಿ ನಡೆಸಿದಾಗ ಗ್ರೌಂಡ್‌ನ ಕೆಳ ಭಾಗದಲ್ಲಿ ಹಾಕಿದ ಬೆಟ್ಟದೆತ್ತರದ ಮಣ್ಣು ಮೊದಲ ಮಳೆಗೆ ಕುಸಿಯ ತೊಡಗಿದ್ದು ಕೆಳ ಭಾಗದಲ್ಲಿರುವ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಮಳೆಯ ನೀರೆಲ್ಲಾ ಮಣ್ಣಿನ ಮೇಲೆಯೇ ಹರಿದಿದ್ದು ಮಣ್ಣು ಕೊಚ್ಚಿಕೊಂಡು ಬಂದು ಕೆಳಭಾಗದ ಚರಂಡಿ ಮತ್ತಿತರ ಪ್ರದೇಶದಲ್ಲಿ ತುಂಬಿದೆ. ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಕ್ರೀಡಾಂಗಣದ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮೇಲ್ಭಾಗದಲ್ಲಿದ್ದ ಮಣ್ಣಿನ ರಾಶಿ ಕೊಚ್ಚಿ ಕೆಳಭಾಗಕ್ಕೆ ಬಂದಿದೆ. ಮಣ್ಣಿನ ಮೇಲೆ ಮಳೆ ನೀರು ಕೊಚ್ಚಿ ಹರಿದು ಭಾರೀ ಗಾತ್ರದ ಕೆಡ್ಡದ ಮಾದರಿ ನಿರ್ಮಾಣವಾಗಿದೆ. ಇದೇ ರೀತಿ ಮುಂದುವರಿದರೆ ಮಣ್ಣು ಕುಸಿದು ಕೆಳಗೆ ಬರುವ ಅಪಾಯ ಇದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದ ಒಂದು ಬದಿಯಲ್ಲಿ ತುಂಬಿದ ಮಣ್ಣನ್ನು ಕುಸಿಯದಂತೆ ನೋಡಿಕೊಳ್ಳಲು ಸ್ಟೆಪ್ ನಿರ್ಮಿಸಲಾಗಿತ್ತು. ಆದರೆ ನಿನ್ನೆ ಸುರಿದ ಭಾರಿ ಮಳೆಗೆ ಆ ಸ್ಟೆಪ್ ಗಳು ಕೂಡ ಜರಿದು ಬಿದ್ದಿದೆ. ಇಲ್ಲಿ ನಡೆಸಲಾಗುತ್ತಿದ್ದ ಕಟಮಗಾರಿಯೂ ಕೆಲವು ದಿನಗಳಿಂದ‌ ಸ್ಥಗಿತಗೊಂಡಿದೆ. ಇಲ್ಲಿ ವಾಸಿಸಲು ಸಾಧ್ಯವಾಗದ ರೀತಿಯ ಸ್ಥಿತಿ ನಿರ್ಮಾಣ ಆಗಿದೆ ಎಂದು ಸ್ಥಳೀಯರು ಹೇಳುತ್ತಾರೆ.


ಭರವಸೆಯಲ್ಲಿಯೇ ಉಳಿದ ತಡೆಗೋಡೆ:
ಮಣ್ಣು ಕುಸಿಯದಂತೆ ಇಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟರು ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಿಲ್ಲ. ಕೇವಲ ಭರವಸೆ ಮಾತ್ರ ಸಿಕ್ಕಿದೆ.
ವರ್ಷ ಒಂದು ಸರಿದು ಮತ್ತೊಂದು ಮಳೆಗಾಲ‌ ಸಮೀಪಿಸುತ್ತಿದ್ದು ಗ್ರೌಂಡ್‌ನ ಕೆಳ ಭಾಗದಲ್ಲಿ ವಾಸಿಸುವ ಜನರಲ್ಲಿ ಮತ್ತೆ ಆತಂಕದ ಕರಿಮೋಡ ಉಂಟಾಗಿದೆ. ಕಳೆದ ವರ್ಷದ ಬೇಸಿಗೆ ಕಾಲದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿ ನಡೆದ ಸಂದರ್ಭದಲ್ಲಿ ತೆಗೆಯಲಾದ ಭಾರೀ

ಪ್ರಮಾಣದ ಮಣ್ಣನ್ನು ಗ್ರೌಂಡ್‌ನ ಕೆಳ ಭಾಗದಲ್ಲಿ ಬೆಟ್ಟದಂತೆ ಎತ್ತರದಲ್ಲಿ ಅವೈಜ್ಞಾನಿಕವಾಗಿ ತುಂಬಿಡಲಾಗಿತ್ತು.ಇದರಿಂದ ಆತಂಕಗೊಂಡ ಜನರು ಮಳೆಗಾಲದಲ್ಲಿ ಮಣ್ಣು ಕುಸಿಯುವ ಅಪಾಯ ಇದೆ ಎಂದು ಸಚಿವರುಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಗ್ರೌಂಡ್‌ನ ಕೆಳ ಭಾಗದಲ್ಲಿ ಈ ರೀತಿ ಮಣ್ಣು ತುಂಬಿರುವುದು ದೊಡ್ಡ ವಿವಾದವೇ ಉಂಟಾಗಿ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿತ್ತು. ಕಳೆದ‌ ಮಳೆಗಾಲದಲ್ಲಿ ಈ ಮಣ್ಣಿನ ಗುಡ್ಡ ಕುಸಿಯದಂತೆ ತಾತ್ಕಾಲಿಕವಾಗಿ ಮಣ್ಣಿನ ಮೇಲೆ ಪ್ಲಾಸ್ಟಿಕ್ ಹೊದಿಕೆಯನ್ಬು ಹಾಸಲಾಗಿತ್ತು. ಮಳೆಗಾಲ ಮುಗಿದ ಕೂಡಲೇ

ತಡೆಗೋಡೆ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಭಾರೀ ಮಳೆ, ಗಾಳಿಗೆ ಪ್ಲಾಸ್ಟಿಕ್ ಹೊದಿಕೆ ಕೆಲವೇ ತಿಂಗಳಲ್ಲಿ ಹರಿದು ಹೋಗಿತ್ತು. ಇದೀಗ ಒಂದು ವರ್ಷ ಕಳೆದರೂ ತಡೆಗೋಡೆ ನಿರ್ಮಾಣ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿ ಕೆಲವು ಕಾಮಗಾರಿ ನಡೆಸಿದ್ದು ಮಣ್ಣಿನ ದಿಬ್ಬವನ್ನು ಕಡಿದು ‘ಪ್ಲಾಟ್‌ಫಾರಂ’ಗಳಂತೆ ಮಾಡಲಾಗಿದೆ. ಆದರೆ ಮಳೆ ಬಂದಾಗ ನೀರು ಇಳಿದು ಮಣ್ಣು ಕುಸಿಯುವುದನ್ನು ತಡೆಯಲು ಇದು ಪೂರಕವಾಗಿಲ್ಲ. ಗುಡ್ಡ ಅಲ್ಲಲ್ಲಿ ಕಡಿದು ಹಾಕಿದ್ದು ಕೆಲವು ದಿನಗಳಿಂದ ಆ ಕೆಲಸವೂ ಸ್ಥಗಿತಗೊಂಡಿದೆ. ಇದೀಗ ಮೊದಲ ಮಳೆಗೇ ಆ‌ ಮಣ್ಣು ಕುಸಿಯಲು ಆರಂಭಿಸಿದೆ. ಮಳೆಗಾಲದಲ್ಲಿ ಗ್ರೌಂಡ್‌ನ ಕೆಳ ಭಾಗದಲ್ಲಿ

ಯಾವುದೇ ಸುರಕ್ಷತೆ ಇಲ್ಲದೆ ಹಾಕಿದ ಮಣ್ಣು ಕುಸಿಯದಂತೆ ಕಲ್ಲು ಅಥವಾ ಕೆಂಪುಕಲ್ಲಿನ ತಡೆಗೋಡೆ ನಿರ್ಮಿಸಲಾಗುವುದು. ಅದಕ್ಕೆ ಅನುದಾನ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಸೇರಿ ಜನಪ್ರತಿನಿಧಿಗಳು ನಮಗೆ ತಿಳಿಸಿದ್ದರು. ಆದರೆ ತಡೆಗೋಡೆ ನಿರ್ಮಾಣ ಇನ್ನೂ ಆರಂಭ ಆಗಿಲ್ಲ. ಕೆಲವು ದಿನಗಳಿಂದ ಅಲ್ಲಲ್ಲಿ ಕಡಿದು ಹಾಕಲಾಗಿದ್ದು ಅದು ಈಗ ಮೊದಲ ಮಳೆಗೆ ಕುಸಿಯುತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಇದೀಗ ಕೆಲವೇ ದಿನದಲ್ಲಿ ಮಳೆಗಾಲ ಅರಂಭವಾಗಲಿದ್ದು ಗ್ರೌಂಡ್‌ನ ಕೆಳ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿದ್ದು ಭಯದ ನೆರಳು ಆವರಿಸಿದೆ.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

previous post
ಅಂಕಣ-ಹವಾ ವೈವಿಧ್ಯ: ಇರುಳಲ್ಲಿ ಪವನನೊಂದಿಗೆ ಬಂದು ಅಬ್ಬರಿಸಿದ ವರುಣ..!
next post
ಪ್ರಜಾಪ್ರಭುತ್ವದ ದೇಗುಲಕ್ಕೆ ನಮಿಸಿ ವಿಧಾನಸಭೆ ಪ್ರವೇಶಿಸಿದ ಶಾಸಕಿ ಭಾಗೀರಥಿ ಮುರುಳ್ಯ

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ: 50 ಮಂದಿ ಸಾವು: 300...

June 2, 2023

ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಅನುಷ್ಠಾನ ಹೇಗೆ.? ಷರತ್ತುಗಳು ಏನು..?...

June 2, 2023

ಐದೂ ಗ್ಯಾರಂಟಿಗಳ ಜಾರಿಗೆ ಸರ್ಕಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ ಘೋಷಣೆ

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ