ಸುಳ್ಯ: ಬಿಜೆಪಿ ಆಭ್ಯರ್ಥಿ ಭಾಗೀರಥಿ ಮುರುಳ್ಯ ಸುಳ್ಯ ನಗರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಸುಳ್ಯನಗರದ ಎ.ಪಿ.ಎಂ.ಸಿ. ಘಟಕಗಳಿಗೆ ಭೇಟಿ ಮಾಡಿ ಮತಯಾಚಿಸಲಾಯಿತು
ಕಾಯರ್ತೊಡಿ ವರದಾಯಿನಿ ವಾಘ್ರ ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆ ಮನೆ ಪ್ರಚಾರ ಕೈಗೊಂಡರು.
ಸ್ನೇಹ ಶಾಲೆ ಮುಖ್ಯಸ್ಥ ಚಂದ್ರಶೇಖರ ದಾಮ್ಲೆ ಮನೆಗೆ ಭೇಟಿ ಮಾಡಿ ಮತ
ಯಾಚಿಸಲಾಯಿತು. ಹಿರೊಯ ಸಂಘಕಾರ್ಯಕರ್ತ ನಾರಾಯಣ ರೈ ಗಾಂಧಿನಗರ ಅವರ ಮನೆಗೆ ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು, ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕೆ.ಸಿ,ಅಕ್ಷಯ್ ಮತ್ತು ಶೋಭಾ ಚಿದಾನಂದ ರನ್ನು ಕಛೇರಿಯಲ್ಲಿ ಭೇಟಿ ಮಾಡಿ ಮತ ಯಾಚಿಸಲಾಯಿತು. ಬೆಳ್ಯಪ್ಪ ಗೌಡ, ಹಿರಿಯರಾದ ಗೋಪಾಲ ರಾವ್ ರವರನ್ನು ಭೇಟಿ ಮಾಡಲಾಯಿತು.
![](https://thesulliamirror.com/wp-content/uploads/2023/04/IMG_20230421_230354.jpg)
ಹಿರಿಯರಾದ ಗಿರಿಧರ ಹೆಗ್ಡೆ ದಂಪತಿಗಳನ್ನು ಭೇಟಿ ಮಾಡಲಾಯಿತು. ಆಯಶಿಲ್ಪ ತೂಗುಸೇತುವೆ ನಿರ್ಮಾಣ ಘಟಕಕ್ಕೆ ಭೇಟಿ ಮಾಡಿ ಮತ ಯಾಚಿಸಲಾಯಿತು. ನಗರದಲ್ಲಿ ವಿವಿಧೆಡೆ ಮನೆ ಮನೆ ಭೇಟಿ ಮಾಡಿ ಹಳೆಗೇಟು, ಜಯನಗರಗಳಲ್ಲಿ ಪ್ರಚಾರ ಮಾಡಲಾಯಿತು.
ಹಳೆಗೇಟು ಶ್ರಿ ಮಹಾಗಣಪತಿ ಮತ್ತು ಶ್ರಿ ಮುತ್ತು ಮಾರಿಯಮ್ಮ ದೈವಸ್ಥಾನಕ್ಕೆ ಭೇಟಿಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
ಹಿರಿಯ ಮುಖಂಡರನ್ನು, ಕಾರ್ಯಕರ್ತರನ್ನು, ಮತದಾರರನ್ನು ಭೇಟಿ ಮಾಡಿ ಮತ ಯಾಚನೆ ಮಾಡಲಾಯಿತು.