ಜಾಲ್ಸೂರು: ಜಾಲ್ಸೂರು ಗ್ರಾಮದ ಕುಕ್ಕಂದೂರು ಪರಿಸರದಲ್ಲಿ ಆನೆ ದಾಳಿ ಮಾಡಿ ಕುಕ್ಕಂದೂರು ನಿವಾಸಿ ಗೋಪಿನಾಥ್ ಸೇರಿದಂತೆ ಹಲವರ ಕೃಷಿ ನಾಶ ಮಾಡಿದ ಘಟನೆ ಜ.8ರಂದು ರಾತ್ರಿ ಸಂಭವಿಸಿದೆ.ಆನೆ ಧಾಳಿಗೆ ಅಡಿಕೆ, ತೆಂಗು, ಬಾಳೆ ಗಿಡಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಕುಕ್ಕಂದೂರು, ಕೆಮನಬಳ್ಳಿ, ನಿಡುಬೆ, ಕುದುಂಗು ಮತ್ತಿತರ ಭಾಗದಲ್ಲಿ ಕಾಡಾನೆಗಳ ಹಿಂಡು ಕೆಲವು ದಿನಗಳಿಂದ ಕೃಷಿ ಹಾನಿ ಮಾಡುತಿದೆ.









