ಬೈಂದೂರು:ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಮೇ.5ರಂದು ಶಾಸಕಿ ಭಾಗೀರಥಿ ಮುರುಳ್ಯ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಕಡೆ ಚುನಾವಣಾ ಪ್ರಚಾರ ನಡೆಸಿದರು. ಹೆಮ್ಮಾಡಿ,
ಜಡ್ಕಲ್ ಉದಯನಗರ,ಕುಂದಾಪುರ ತಾಲೂಕಿನ
ಕಣಗಲ್ ಹಾಡಿ, ಮುದೂರು,ಗಂಗೊಳ್ಳಿಯ ಜನತಾ ಕಾಲೋನಿ,ನಾಯಕವಾಡಿ,
ಗುಜ್ಜಾಡಿ, ಅಂಪಾರ ಕಾಲೋನಿಯಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಅವರ ಪರ ಪ್ರಚಾರ ನಡೆಸಿದರು.ಈ ಸಂದರ್ಭದಲ್ಲಿ
ರಾಜ್ಯ ಎಸ್ಸಿ ಮೊರ್ಚಾದ ಉಪಾಧ್ಯಕ್ಷ ದಿನಕರಬಾಬು, ಉಡುಪಿ ಜಿಲ್ಲಾ ಎಸ್.ಸಿ ಮೊರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ಬೈಂದೂರು ಮಂಡಲ ಎಸ್.ಸಿ ಮೊರ್ಚಾ ಅಧ್ಯಕ್ಷ ಆಶೋಕ್ ಗಂಗೊಳ್ಳಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಬೈಂದೂರು,ಎಸ್.ಸಿ.ಮೊರ್ಚಾ ಬೈಂದೂರು ಮಂಡಲ ಕೋಶಾಧಿಕಾರಿ ಶಶಿದೀಪ್, ದ.ಕ.ಜಿಲ್ಲಾ ಸಾಮಾಜಿಕ ಜಾಲಾತಾಣ ಸದಸ್ಯ ಪ್ರಸಾದ್ ಕಾಟೂರು,ಕಾರ್ಯಕರ್ತರಾದ ಸುಖೇಶ್ ಬೈಂದೂರು,ಧೀರೆಶ್,
ಮತ್ತು ಆಭಾಗದ ಕಾರ್ಯಕರ್ತರು ಉಪಸ್ಥಿತರಿದ್ದರು.