ಸುಳ್ಯ: ಮೇ 27ರಿಂದ ಮೇ 31ರ ತನಕ ಹೈದರಾಬಾದ್ನಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ನವದೆಹಲಿ (ಎನ್.ಸಿ.ಐ.ಎಸ್.ಎಮ್) ಇದರ ಸಹಭಾಗಿತ್ವದಲ್ಲಿ ನಡೆದ “ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ತರಬೇತುದಾರರ ತರಬೇತಿ” ಕಾರ್ಯಗಾರದಲ್ಲಿ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶಲ್ಯ ತಂತ್ರ ವಿಭಾಗ ಮುಖ್ಯಸ್ಥರಾದ ಪ್ರೊಪೇಸರ್ ಡಾ. ಹರ್ಷವರ್ಧನ್ ಕೆ. ಯವರು ಭಾಗವಹಿಸಿದ್ದಾರೆ.







