ಸುಳ್ಯ:ರಾಜ್ಯ ಸಂಪುಟ ದರ್ಜೆ ಸ್ಥಾನ ದೊರೆತ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರಿಗೆ ಸುಳ್ಯದಲ್ಲಿ ಸ್ವಾಗತ ನೀಡಲಾಯಿತು. ಟಿ. ಎಂ. ಶಹೀದ್ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ ನೇತೃತ್ವದಲ್ಲಿ
ಪಕ್ಷದ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿ ಗಳು ಸ್ವಾಗತಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯರಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ. ಬಿ. ಇಬ್ರಾಹಿಂ, ತೋಟ ತೊಯಿಳಾಲರ್ ಕಾರ್ಮಿಕ ಸಂಘಟನೆ ಅಧ್ಯಕ್ಷ ಗಣೇಶ್ ಕೆ. ಎಫ್ ಡಿ ಸಿ,ಉದ್ಯಮಿ ಸಲೀಂ ಪೆರುoಗೋಡಿ, ಹಸೈನಾರ್ ಅಚ್ರು,ಅಬ್ದುಲ್ ಖಾದರ್ ಕಲ್ಲುಗುಂಡಿ, ಲತೀಫ್ ಎಂ. ಕೆ, ಸಂಶುದ್ದೀನ್ ಬೊಳುಬೈಲು, ಹನೀಫ್ ಬೀಜಕೊಚ್ಚಿ, ಇಕ್ಬಾಲ್ ಸುಣ್ಣ ಮೂಲೆ, ಮನ್ಸೂರ್ ಮೆಟ್ರೋ ಮೊದಲಾದವರು ಉಪಸ್ಥಿತರಿದ್ದರು.
















