ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಶನಿವಾರ ನಡೆದ ಮಂಡಲ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಮೂಲಕ 41 ದಿನಗಳಿಂದ ನಡೆದ ವಾರ್ಷಿಕ ತೀರ್ಥಯಾತ್ರೆ ಸಂಪನ್ನಗೊಂಡಿತು.
ಶುಕ್ರವಾರ ಸಂಜೆ ದೇವಾಲಯದ ಸಂಕೀರ್ಣಕ್ಕೆ ಮೆರವಣಿಗೆಯಲ್ಲಿ
ತರಲಾದ ತಂಗ ಅಂಗಿ (ಸ್ವರ್ಣವಸ್ತ್ರ) ಯನ್ನು ಅಯ್ಯಪ್ಪ ದೇವರ ವಿಗ್ರಹಕ್ಕೆ ಅಲಂಕಾರ ಮಾಡಿ, ಮಂಡಲ ಪೂಜೆ ನೆರವೇರಿಸಲಾಯಿತು. ದೇವಾಲಯದ ತಂತ್ರಿ ಕಂಡರಾರು ಮಹೇಶ್ ಮೋಹನಾರು ಅವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ 10.10ರಿಂದ 11.30ರವರೆಗೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಹಾಗೂ ಮಾಲೆ ಧರಿಸಿದವರು ‘ಇರುಮುಡಿ’ ಹೊತ್ತು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.ರಾತ್ರಿ ಗಂಟೆಗೆ ‘ಹರಿವರಾಸನಂ’ ಪಠಣದ ನಂತರ ಪೂಜೆ ನೆರವೇರಿಸಿ ದೇವಾಲಯದ ಬಾಗಿಲು ಮುಚ್ಚಲಾಯಿತು. ಮಕರವಿಳಕ್ಕು ಹಬ್ಬಕ್ಕಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ದೇವಾಲಯ ಮತ್ತೆ ತೆರೆಯಲಿದೆ.

















