ಸುಳ್ಯ:ಇತಿಹಾಸ ಪ್ರಸಿದ್ಧ ಕುಂಭಕ್ಕೋಡು ವಲಿಯತ್ತುಲ್ಲಾಹಿ ಮಣವಾಟಿ ಬೀವಿ ಮಖಾಂ ಶರೀಫ್ನಲ್ಲಿ ಉರೂಸ್ ಮುಬಾರಕ್ ಮತ್ತು ಪಳ್ಳಿ ನೇರ್ಚೆ ಕಾರ್ಯಕ್ರಮ ಡಿ.19ರಿಂದ ಆರಂಭಗೊಂಡಿದ್ದು ಇಂದು(ಡಿ.22) ಸಮಾಪನಗೊಳ್ಳಲಿದೆ.ಡಿ.19ರಂದು ಉರೂಸ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಯಂಗಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ
ಉರೂಸ್ ಸಮಾರಂಭ ಆರಂಭಗೊಂಡಿತು.ಸಂಜೆ ಖತ್ಮುಲ್ ಕುರ್ಅನ್ ಮತ್ತು ಪಳ್ಳಿ ನೇರ್ಚೆ ಮೌಲೀದ್ ನಡೆಯಿತು.ಅಸ್ಸಯ್ಯದ್ ಉಮರ್ ಜಿಫ್ರಿ ಆಲ್ ಹನೀಫಿ ಕೊಡಿಞ್ಞಿ ಮಲಪ್ಪುರಂ ನೇತೃತ್ವ ವಹಿಸಿದ್ದರು. ಅಸ್ಸಯ್ಯಿದ್ ಕುಂಞಿಕ್ಕೋಯ ಸಅದಿ ತಂಙಳ್ ಉದ್ಘಾಟಿಸಿದರು.
ಉರೂಸ್ ಕಮಿಟಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಯಂಗಿ ಅಧ್ಯಕ್ಷತೆ ವಹಿಸಿದ್ದರು. ಮುಹಮ್ಮದ್ ಇರ್ಷಾದ್ ಅಝ್ಹರಿ ಪರಂಬಲ್ಪೀಡಿಗೆ ಮಲಪ್ಪುರಂ ಮುಖ್ಯ ಭಾಷಣ ಮಾಡಿದರು.ಕುಂಭಕ್ಕೋಡು ಜಮಾ ಅತ್ ಕಮಿಟಿ ಜೊತೆ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪೈಂಬಚ್ಚಾಲ್ ಜಮಾ ಅತ್ ಕಮಿಟಿ ಅಧ್ಯಕ್ಷ ಕೆ.ಪಿ, ಅಬ್ದುಲ್ ಖಾದರ್, ಉರೂಸ್ ಸಮಿತಿ ಗೌರವ ಸಲಹೆಗಾರರಾದ ಪಿ.ಎಂ. ಮೂಸಾ ಕುಂಞಿ, ಕುಂಭಕ್ಕೋಡು ಜಮಾ ಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಸಅದಿ,ವಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಅದಿ, ಜಮಾ ಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಹಾಜಿ ಅಲ್ ಮದೀನ, ಜಮಾ ಅತ್ ಸಮಿತಿ, ಉರೂಸ್ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಡಿ.20ರಂದು ಸಂಜೆ 7ಕ್ಕೆ ಧಾರ್ಮಿಕ ಪ್ರಭಾಷಣ ನಡೆಯಿತು.ನಿಯಾಝ್ ಸಅದಿ ಉದ್ಘಾಟನಾ ದುವಾಃ ನೆರವೇರಿಸಿದರು. ಕುಂಭಕ್ಕೋಡು ಜಮಾ ಅತ್ ಉಪಾಧ್ಯಕ್ಷ ಮುಹಮ್ಮದ್ ಅಲ್ ಮದೀನ ಅಧ್ಯಕ್ಷತೆ ವಹಿಸಿದ್ದರು. ಮೊಗರ್ಪಣೆ ಜುಮಾ ಮಸೀದಿ ಖತೀಬರಾದ ಅಬ್ದುಲ್ ಖಾದರ್ ಸಖಾಫಿ ಮುದುಗಡ ಮುಖ್ಯ ಭಾಷಣ ಮಾಡಿದರು. ಹಾಜಿ ಮಹಮ್ಮದ್ ಕೋಲ್ಚಾರ್, ಕೋಶಾಧಿಕಾರಿ ಜಮಾಅತ್ ಕಮಿಟಿ ಕುಂಭಕ್ಕೋಡು, ಇಸ್ಮಾಯಿಲ್ ಮದನಿ ಅಧ್ಯಕ್ಷರು ಕುಂಭಕ್ಕೋಡು ಯು.ಎ.ಇ ಜಮಾಅತ್ ಕಮಿಟಿ ಉಪಸ್ಥಿತರಿದ್ದರು.
ಡಿ.21ರಂದು ರಾತ್ರಿ ಮತ ಪ್ರಭಾಷಣ ನಡೆಯಿತು.
ಕುಂಭಕ್ಕೋಡು ಜಮಾತ್ ಸಮಿತಿ ಪ್ರಧಾನ ಕಾರ್ಯದರ್ಶಿ
ಇಬ್ರಾಹಿಂ ಹಾಜಿ ಅಲ್ ಮದೀನ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಹ್ಮಾನ್ ಸಖಾಫಿ ಅಮ್ಚಿನಡ್ಕ ಖತೀಬರು. ಬಿ.ಜೆ.ಎಂ ಪೈಂಬಚ್ಚಾಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದಲಿ ಸಖಾಫಿ ಕುಯಿತ್ತಲ್ ಖತೀಬರು ಕುಂಭಕ್ಕೋಡು ಜಮಾಅತ್ ಮುಖ್ಯ ಭಾಷಣ ಮಾಡಿದರು.
ಹಾಜಿ ಜಿ.ಎ.ಮುಹಮ್ಮದ್ ಏಣಾವರ, ಮಾಜಿ ಅಧ್ಯಕ್ಷರು, ಜಮಾತ್ ಕಮಿಟಿ ಕುಂಭಕೋಡು, ಅಬ್ದುಲ್ ರಹ್ಮಾನ್ ಕೋಯಂಗಿ ಪಿಆರ್ಒ ಜಮಾತ್ ಸಮಿತಿ ಕುಂಭಕೋಡು ಉಪಸ್ಥಿತರಿದ್ದರು.

ಇಂದು ಸಮಾರೋಪ ಸಮಾರಂಭ:
22ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಅಸರ್ ನಮಾಝ್ ಬಳಿಕ ಉರೂಸ್ ಮೌಲೀದ್ ಮತ್ತು ಮಖಾಂ ಝಿಯಾರತ್ ನಡೆಯಲಿದೆ. ಅಸ್ಸಯ್ಯದ್ ಉಮರ್ ಜಿಫ್ರಿ ಅಲ್ ಹನೀಫಿ ಕೋಡಿಞ್ಞಿ ಮಲಪ್ಪುರಂ ನೇತೃತ್ವ ವಹಿಸುವರು.
ರಾತ್ರಿ ಸಭಾ ಕಾರ್ಯಕ್ರಮ ನಡೆಯಲಿದ್ದು ಅಸ್ಪಯ್ಯದ್ ಅಬ್ದುಲ್ ರಹ್ಮಾನ್ ಮಶ್ಹೂದ್ ಅಲ್ ಬುಖಾರಿ ಕೂರತ್ ಉದ್ಘಾಟನಾ ದುವಾ ನೆರವೇರಿಸುವರು. ಕುಂಭಕ್ಕೋಡು ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಸಅದಿ ಅಧ್ಯಕ್ಷತೆ ವಹಿಸುವರು.ಗಾಂಧಿನಗರ ಜುಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡುವರು.ಡಾ. ಅಸ್ಪಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ (ಮುತ್ತನ್ನೂರು ತಂಙಳ್) ಮುಖ್ಯ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸ್ಪೀಕರ್ ಯು.ಟಿ. ಖಾದರ್ ಫರೀದ್ ಭಾಗವಹಿಸುವರು. ಅತಿಥಿಗಳಾಗಿ ಸುಲೈಮಾನ್ ಮುಸ್ಲಿಯಾರ್,ಸಫಾ (ಸಾದಿಯಾ) ಆಂಗ್ಲ ಮಾಧ್ಯಮ ಶಾಲೆ ಕುತ್ತಿಕೋಲ್, ಕಾರ್ಮಿಕ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ. ಮುಸ್ತಫ, ಪ್ರಮುಖರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಅಬೂಬಕರ್ ಅಡ್ಕಾರ್, ಮೂಸ ಕುಂಞಿ ಪಿ. ಎಂ. ಪೈಂಬಚ್ಚಾಲು, ಹಮೀದ್ ಕುತ್ತಮೊಟ್ಟೆ, ಮುಹಮ್ಮದ್ ಕುಂಞಿ ಗೂನಡ್ಕ ಮತ್ತಿತರರು ಭಾಗವಹಿಸಲಿದ್ದಾರೆ.













