ಸುಳ್ಯ:ಸುಳ್ಯ ನಗರ ಪಂಚಾಯತ್ ವಾರ್ಡ್ ಸದಸ್ಯರಾಗಿದ್ದ ಕೆ.ಎಸ್.ಉಮ್ಮರ್ ಅವರ ಅನುದಾನದಡಿಯಲ್ಲಿ ಬೋರುಗುಡ್ಡೆ ವಾರ್ಡ್ ಜಟ್ಟಿಪ್ಪಳ್ಳ ರಸ್ತೆಯ ಬಲ ಭಾಗದ ಕನಿಕರಪಳ್ಳ 2ನೇ ಅಡ್ಡ ರಸ್ತೆಯ ಕಾಂಕ್ರಿಟೀಕರಣ ಪೂರ್ಣ ಗೊಂಡಿದ್ದು ರಸ್ತೆಯ ಉದ್ಘಾಟನೆಯನ್ನು
ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಮತ್ತು ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯ ಕೆ.ಎಎಸ್.ಉಮ್ಮರ್ ಸೇರಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೆ. ಎಸ್. ಉಮ್ಮರ್ ನಡೆದಾಡಲೂ ಸಾಧ್ಯವಾಗದೆ ದುಸ್ಥಿತಿಯಲ್ಲಿದ್ದ 2ನೇ ಅಡ್ಡ ರಸ್ತೆ ಸರ್ವ ಋತು ರಸ್ತೆಯಾಗಿ ಕಾಂಕ್ರಿಟಿಕರಣ ಕಾಮಗಾರಿ ಯಾಗಬೇಕೆಂದು ಇಲ್ಲಿನ ನಿವಾಸಿಗಳ ಬಹು ಕಾಲದ ಬೇಡಿಕೆಯಾಗಿತ್ತು, ಕಾಮಗಾರಿಯ ಸಂದರ್ಭದಲ್ಲಿ ನಿವಾಸಿಗಳ ಉತ್ತಮ ರೀತಿಯ ಸಹಕಾರದಿಂದ ರಸ್ತೆ ಉತ್ತಮ ರೀತಿಯಲ್ಲಿ ನಿರ್ಮಾಣ ವಾಗಲು ಸಾಧ್ಯ ವಾಗಿದೆ ಎಂದರು
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಇಂದಿರಾ ಟೀಚರ್, ರಫೀಕ್, ಕುಶಾಲಪ್ಪ, ರವಿ, ರಫೀಕ್, ಸಿಯಾದ್, ಲತೀಫ್ ಮೊದಲಾದವರು ಉಪಸ್ಥಿತರಿದ್ದರು.













