ಮಂಗಳೂರು: ಅಡಿಕೆ ಬೆಳೆಗಾರರ ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೊ ಆಡಳಿತ ಮಂಡಳಿಯ ಆರು ಸ್ಥಾನಗಳಿಗೆ ಚುನಾವಣೆ ನಡೆದ ಚುನಟವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಇಂದು ಮತ ಏಣಿಕೆ ಪ್ರಕ್ರಿಯೆ ನಡೆಯಿತು. ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧೆಸಿದ್ದ
ಮುರಳಿ ಕೃಷ್ಣ ಕೆ.ಎನ್(2261 ಮತ),ಎ.ವಿ.ತೀರ್ಥರಾಮ(2052),ಎಸ್ ಆರ್ ಸತೀಶಚಂದ್ರ(2181), ದಯಾನಂದ ಹೆಗ್ಡೆ(2163), ಮಹೇಶ್ ಚೌಟ(2216), ಪುರುಷೋತ್ತಮ್ ಭಟ್(2249), ಜಯಗಳಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸತ್ಯನಾರಾಯಣ ಎಂ.ಜಿ-620, ರಾಮಪ್ರತೀಕ್-623 ಮತ ಪಡೆದರು. ಇಂದು ಮತ ಎಣಿಕೆ ನಡೆದರೂ, ಫಲಿತಾಂಶದ ಅಧಿಕೃತ ಘೋಷಣೆ ನ.28ರಂದು ನಡೆಯಲಿದೆ.
ಕ್ಯಾಂಪ್ಕೋ ಆಡಳಿತ ಮಂಡಳಿಯ 19 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು ಉಳಿದ ಆರು ಸಾಮಾನ್ಯ ಸ್ಥಾನಗಳಿಗೆ 8 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.ಕರ್ನಾಟಕ ರಾಜ್ಯದ 10 ಹಾಗೂ ಕೇರಳ ರಾಜ್ಯದ ಒಂಬತ್ತು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.
ಕೇರಳ ಎಲ್ಲಾ ಒಂಬತ್ತು ಹಾಗೂ ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.ಕರ್ನಾಟಕದಿಂದ ಮಾಲಿನಿಪ್ರಸಾದ್, ಗಣೇಶ್, ರಾಘವೇಂದ್ರ ಎಂ.ಎಚ್ ಮತ್ತು ವಿಶ್ವನಾಥ ಈಶ್ವರ ಹೆಗಡೆ, ಕೇರಳದಿಂದ ಸೌಮ್ಯ, ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣ, ಗಣೇಶ್ ಕುಮಾರ್, ವೆಂಕಟ್ರಮಣ ಭಟ್ ಹಾಗೂ ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.













