ಸುಳ್ಯ:ಅಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2022-23ನೇ ಸಾಲಿನಲ್ಲಿ ರೂ. 879.65 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ರೂ 1.51 ಕೋಟಿಗೂ ಮಿಕ್ಕಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ 20 ರಷ್ಟು ಡಿವಿಡೆಂಟ್ ವಿತರಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ತಿಳಿಸಿದ್ದಾರೆ. ಗೌಡ ಸಮುದಾಯ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಗೌಡರ ಯುವ ಸೇವಾ ಸಂಘದ ವತಿಯಿಂದ ಪ್ರವರ್ತಿಸುತ್ತಿರುವ
ಸೊಸೈಟಿಯು 430 ಸದಸ್ಯರಿಂದ ದೂ 5,95,300/- ಪಾಲು ಬಂಡವಾಳದಿಂದ ಆರಂಭಿಸಿದ ಸಹಕಾರ ಸಂಘ ಪ್ರಸ್ತುತ ಕಾರ್ಯ ಕ್ಷೇತ್ರವನ್ನು ರಾಜ್ಯ ಮಟ್ಟಕ್ಕೆವಿಸ್ತರಿಸಿಕೊಂಡು ವ್ಯವಹಾರ ನಡೆಸುತ್ತದೆ.
ಸಹಕಾರ ಸಂಘದಲ್ಲಿ ಮಾರ್ಚ್ 31, 2023 ರ ಅಂತ್ಯಕ್ಕೆ 16,960 ಜನ ವಿವಿಧ ವರ್ಗದ ಸದಸ್ಯರಿದ್ದು ಅವರಿಂದ ರೂ. 4.26 ಕೋಟಿ ಪಾಲು ಬಂಡವಾಳ, ರೂ 156.53 ಕೋಟಿ ಠೇವಣಿ ಸಂಗ್ರಹಿಸಿದೆ. ಸದಸ್ಯರುಗಳಿಗೆ ರೂ. 145.43 ಕೋಟಿ ವಿವಿಧ ಸಾಲಗಳನ್ನು ವಿತರಿಸಲಾಗಿದೆ. ರೂ. 13.69 ಕೋಟಿ ವಿವಿಧ ಬ್ಯಾಂಕ್ಗಳಲ್ಲಿ ಧನ ವಿನಿಯೋಗ ಮಾಡಿದ್ದು
ಸಂಘದ ಲೆಕ್ಕ ಪರಿಶೋಧನೆ ವರ್ಗೀಕರಣವು ‘ಎ’ ತರಗತಿಯಾಗಿದೆ.
ಸಂಘವು ಈ ಸಹಕಾರ ವರ್ಷದಲ್ಲಿ ಹತ್ತನೇ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದೆ.

ಸಂಘಕ್ಕೆ ರೂ. 8.41 ಕೋಟಿ ವಿವಿಧ ನಿಧಿಗಳಿದ್ದು, ಸಂಘದ ದುಡಿಯುವ ಬಂಡವಾಳವು: ರೂ. 174, ಕೋಟಿ ಇದೆ. ಸಂಘದ 16 ಶಾಲೆಗಳಲ್ಲಿ ಇ-ಸ್ಟಾಂಪಿಂಗ್ ಕೇಂದ್ರಗಳನ್ನು ತೆರೆದಿದ್ದು, ಸುಳ್ಳ ಶಾಖೆಯಲ್ಲಿ ಕಡಿಮೆ ಬಾಡಿಗೆಗೆ ಸೇಫ್ ಲಾಕರನ್ನು ಸದಸ್ಯರುಗಳಿಗೆ ನೀಡುತ್ತಿದ್ದೇವೆ, ಗ್ರಾಹಕರ ಅನುಕೂಲಕ್ಕಾಗಿ ಆರ್.ಟಿ.ಜಿ.ಎಸ್/ನೆಫ್ಟ್ ಸೌಲಭ್ಯವನ್ನು ಕೂಡಾ ಕಲ್ಪಿಸಿರುತ್ತೇವೆ. ಸಂಘವು ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ 22 ಶಾಖೆಗಳನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲಿ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಆಲಂಗಾರಿನಲ್ಲಿ 23 ನೇ ಶಾಖೆಯನ್ನು ಆರಂಭಿಸಲಿದೆ
ಮುಂದಿನ ಆರ್ಥಿಕ ವರ್ಷದಲ್ಲಿ ರೂ. 250 ಕೋಟಿ ಠೇವಣಿ ಸಂಗ್ರಹಿಸಿ, ಸದಸ್ಯರುಗಳಿಗೆ ರೂ, 200 ಕೋಟಿ ಸಾಲ ವಿತರಿಸಿ, ರೂ. 1,000 ಕೋಟಿ ವಾರ್ಷಿಕ ವ್ಯವಹಾರ ನಡೆಸುವ ಯೋಜನೆಯನ್ನು ಆಡಳಿತ ಮಂಡಳಿಯ ಹೊಂದಿರುತ್ತದೆ. ಹಾಗೂ ಈ ಸಹಕಾರ ವರ್ಷದಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಇದರ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ 3 ಶಾಖೆಗಳನ್ನು ಪ್ರಾರಂಭಿಸಿದ್ದು 25 ಶಾಖೆಗಳ ಗುರಿಯನ್ನು ಆಡಳಿತ ಮಂಡಳಿಯು ಹೊಂದಿದೆ ಎಂದು ಪಿ.ಸಿ.ಜಯರಾಮ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ,
ಮುಖ್ಯ ಕಾರ್ಯನಿರ್ವಹಣಾನಿಕಾರಿ ಕೆ.ಟಿ. ವಿಶ್ವನಾಥ, ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ಎ.ವಿ ತೀರ್ಥರಾಮ, ಚಂದ್ರ ಕೋಲ್ದಾರ್, ಕೆ.ಸಿ ನಾರಾಯಣ ಗೌಡ, ಸದಾನಂದ ಜಾಕೆ, ಪಿ.ಎಸ್.ಗಂಗಾಧರ, ದಾಮೋದರ ನಾರ್ಕೋಡು, ಕೆ.ಸಿ.ಸದಾನಂದ, ದಿನೇಶ ಮಡಪ್ಪಾಡಿ, ಜಯಲಲಿತಾ, ನಳಿನಿ ಸೂರಯ್ಯ, ಲತಾ ಎಸ್ ಮಾವಜಿ, ಹೇಮಚಂದ್ರ ಐ.ಕೆ, ನವೀನ್ ಕುಮಾರ್ ಜಾಕೆ ಉಪಸ್ಥಿತರಿದ್ದರು.