ಅರಂತೋಡು: ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿ ಅರಂತೋಡು ಇದರ ಆಶ್ರಯ ದಲ್ಲಿ ವಿಶೇಷ ಸಭೆಯು ಅಕ್ಟೋಬರ್ 16 ರಂದು ಅರಂತೋಡಿನ ರಬ್ಬರ್ ಉತ್ಪಾದಕರ ಸಂಘ ದ ಸಭಾಭವನದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಶ್ರೀಜಿತ್ ಎ. ಜಿ ಅಧ್ಯಕ್ಷ ತೆ ವಹಿಸಿದ್ದರು. ಕುಂಬಳಚೇರಿ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯಲಿರುವ
ದೈವಕಟ್ಟು ಮಹೋತ್ಸವದ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಸಮಿತಿಯ ವ್ಯಾಪ್ತಿಯ ಅರಂತೋಡು, ಪೆರಾಜೆ, ತೊಡಿಕಾನದ ಪ್ರತಿ ಸದಸ್ಯರ ಮನೆಗಳಲ್ಲಿ ಮಾಸಿಕ ಸಭೆಗಳನ್ನು ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಗೋಪಾಲ ಎ.ಎಂ, ಶಿವರಾಮ, ಕೋಶಾಧಿಕಾರಿ ಪ್ರದೀಪ್. ಕೆ ಉಪಾಧ್ಯಕ್ಷ ಬಿನು ಪೆರಾಜೆ, ಸದಸ್ಯರಾದ ಕುಂಞಿಕಣ್ಣ ಪೆರಾಜೆ, ಗಣೇಶ್ ಬಿ. ಕೆ, ಬಾಲಕೃಷ್ಣ ಅಂಗಡಿಮಜಲು, ಸತೀಶ್ ತೊಡಿಕಾನ, ಪುರುಷೋತ್ತಮ ಕೊಡಂಕೇರಿ, ಚೇತನ್ ಎಲ್ಪಕಜೆ,ಕರುಣಾಕರ ಕಡೆಪಾಲ, ಸುಕುಮಾರ ಚಾಂಬಾಡು,ಕೃಷ್ಣ ಪೆರಾಜೆ, ಸುಪ್ರೀತ್ ಚಾಂಬಾಡು, ಪದ್ಮ ನಾಭ ಅಂಗಡಿಮಜಲು, ಅಮ್ಮಣಿ ಚಿಟ್ಟನೂರು, ರಾಧಾ ಚಾಂಬಾಡು, ಜನಾರ್ಧನ ಬಂಡಡ್ಕ, ಮಿಥುನ್ ಎಲ್ಪಕಜೆ ಮತ್ತಿತರರು ಉಪಸ್ಥಿತರಿದ್ದರು